ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಇತಿಹಾಸ ಪ್ರಸಿದ್ಧ ತಿಂಗಳೆಯಲ್ಲಿ 61ನೇ ತಿಂಗಳೆ ಸಾಹಿತ್ಯೋತ್ಸವವು ಮಾ.8 ರಂದು ಸಂಜೆ 7 ಗಂಟೆಗೆ ತಿಂಗಳೆಯ ವಿಕ್ರಮಾರ್ಜುನ ಹೆಗ್ಗಡೆ ತಿಳಿಸಿದ್ದಾರೆ.
‘ತಂತ್ರ ದರ್ಶನ’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಡಾ.ವೀಣಾ ಬನ್ನಂಜೆ ಅವರು ‘ಅಕ್ಕನ ತಂತ್ರ’, ವಸಂತ ಗಿಳಿಯಾರು ‘ಜೀವನ ತಂತ್ರ’, ಮತ್ತು ಶ್ರೀಕಾಂತ್ ಶೆಟ್ಟಿ ‘ದೈವಾರಾಧನೆ’ಯಲ್ಲಿ ತಂತ್ರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಈ ಬಾರಿಯ ತಿಂಗಳೆ ಸಾಹಿತ್ಯೋತ್ಸವ ಅಧ್ಯಕ್ಷತೆಯನ್ನು ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ವಹಿಸಲಿದ್ದು, ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಕೆ.ಎಸ್.ನಿತ್ಯಾನಂದ ಆಶೀರ್ವಚನ ನೀಡಲಿದ್ದಾರೆ.
ಅತಿಥಿಯಾಗಿ ಅಂಬಾತನಯ ಮುದ್ರಾಡಿ, ಬೆಂಗಳೂರಿನ ಉದ್ಯಮಿ ದಿನೇಶ್ ಕಾಮತ್, ಜಾನಪದ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ, ದಿವಾಕರ ಪೂಜಾರಿ ಜಾರಿಗೆಕಟ್ಟೆ ಭಾಗವಹಿಸಲಿದ್ದಾರೆ.
ರಾತ್ರಿ 10 ಗಂಟೆಗೆ ಯಕ್ಷಗಾನದ ಯುವ ಪ್ರತಿಭೆ ‘ಯಕ್ಷ ಮಾಣಿಕ್ಯ’ ಚಿಂತನ ಹೆಗಡೆ ಅವರ ಭಾಗವತಿಕೆಯಲ್ಲಿ ‘ನರಕಾಸುರ ವಧೆ’ ಯಕ್ಷಗಾನ ನಡೆಯಲಿದೆ. ಮಾರ್ಚ್ 6, 7, 8 ರಂದು ತಿಂಗಳೆ ಧರ್ಮ ದೈವಗಳ ನೇಮ ನಡೆಯಲಿದೆ ಎಂದು ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement. Scroll to continue reading.