ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಕಾರ್ಕಳ ಉತ್ಸವದ ಅಂಗವಾಗಿ ಹೆಬ್ರಿಯಲ್ಲಿ ಬೃಹತ್ ಉತ್ಸವ ಸ್ವಚ್ಛತೆಯ ಅಂಗವಾಗಿ ಚಾರ ನವೋದಯದಿಂದ, ರಾಮಾಂಜನೇಯ ಇಂಡಸ್ಟ್ರಿಸ್ ತನಕ ಕುಚ್ಚೂರು ಗ್ರಾಮ ಪಂಚಾಯಿತಿ, ಚಾರ ನವೋದಯ ವಿದ್ಯಾಲಯ ಹಾಗೂ ಶಾಂತಿನಿಕೇತನ ಯುವವೃಂದ ಕುಡಿಬೈಲ್ ಕುಚ್ಚೂರಿನ ಸಹಯೋಗದೊಂದಿಗೆ ಬೃಹತ್ ಸ್ವಚ್ಛತಾ ಅಭಿಯಾನ ಬುಧವಾರ ನಡೆಯಿತು.
ಈ ಸಂದರ್ಭದಲ್ಲಿ ಕುಚ್ಚೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿ, ಸದಸ್ಯರಾದ ಮಹೇಶ್ ಶೆಟ್ಟಿ ಬಾದ್ಲು, ಮಹೇಶ್ ಶೆಟ್ಟಿ ಕುಚ್ಚೂರು, ಸತೀಶ್ ಪೂಜಾರಿ, ಸುಜಾತ ಶೆಟ್ಟಿ, ಮಾಲಿನಿ, ಪಿಡಿಒ ಪುರಂದರ್ ಹಾಗೂ ಶಾಂತಿನಿಕೇತನದ ಆಡಳಿತ ಮಂಡಳಿ ಸದಸ್ಯರಾದ ರವೀಶ್ ಶೆಟ್ಟಿ, ಜಯಕರ್ ಹಾಗೂ ಚಾರ ನವೋದಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Advertisement. Scroll to continue reading.