ಉಡುಪಿ : ಉಡುಪಿಯ ರಥ ಬೀದಿ ಗೆಳೆಯರು ದ.ಕ ಮತ್ತು ಉಡುಪಿ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪಾ.ವೆಂ ಆಚಾರ್ಯರ ತುಳು ಕವನ ವಾಚನ ವೀಡಿಯೋ ಸ್ಪರ್ಧೆಯಲ್ಲಿ ಹೆಬ್ರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಮ್ ವಿದ್ಯಾರ್ಥಿನಿ ಅಕ್ಷಿತಾ ಕೆ.ಶೆಟ್ಟಿ ಪ್ರಥಮ ಬಹುಮಾನ ಪಡೆದಿದ್ದಾರೆ.
ಕಟಪಾಡಿಯ ತೃಶಾ ವಿದ್ಯಾ ಕಾಲೇಜಿನ ಪ್ರಥಮ ಬಿ. ಕಾಮ್ ವಿದ್ಯಾರ್ಥಿ ಅಖಿಲೇಶ್ ಪೂಜಾರಿ, ಅದೇ ಕಾಲೇಜಿನ ಪ್ರಥಮ ಬಿ. ಕಾಮ್ ವಿದ್ಯಾರ್ಥಿನಿ ಅಂಕಿತಾ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಬ್ರಹ್ಮಾವರದ ಜಿ. ಎಂ ವಿದ್ಯಾ ನಿಕೇತನ ಪಬ್ಲಿಕ್ ಸ್ಕೂಲ್ ನ
ಅನುಷ್ಕ ಎನ್ ಪಡುಕುದ್ರು, ಪ್ರೋತ್ಸಾಹಕ ಬಹುಮಾನ ಪಡೆದಿದ್ದಾರೆ ಎಂದು ರಥ ಬೀದಿ ಗೆಳೆಯರುವಿನ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಜೋಶಿ ತಿಳಿಸಿದ್ದಾರೆ
Advertisement. Scroll to continue reading.