ವರದಿ : ಶಫೀ ಉಚ್ಚಿಲ
ಕಾಪು: ಶಿರ್ವದಲ್ಲಿ ಜೆಸಿಬಿ ಯಂತ್ರ ಬಳಸಿ ದಲಿತ ಮಹಿಳೆಯ ಮನೆ ಧ್ವಂಸಗೊಳಿಸಿರುವ ಆಡಳಿತಶಾಹಿ ಮತ್ತು ಅವರಿಗೆ ಪ್ರಚೋದನೆ ನೀಡುವವರಿಗೆ ಅತ್ಯಂತ ನಾಚಿಕೆಗೇಡಿನ ವಿಚಾರವಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಾ.ದೇವಿ ಪ್ರಸಾದ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿರ್ವಾ ಗ್ರಾ.ಪಂ ವ್ಯಾಪ್ತಿಯಲ್ಲಿ ವೃದ್ಧೆಯೋರ್ವರು ವಾಸಿಸುತ್ತಿದ್ದ ಮನೆಯನ್ನು ಅಧಿಕಾರಿಗಳು ಕೆಡವಿ ಹಾಕಿದ್ದಾರೆ. ಘಟನೆಯನ್ನು ಖಂಡಿಸಿ ಮಾಜಿ ಸಚಿವ ವಿನಯಕುಮಾರ್ ಸೊರಕೆಯವರ ನೇತ್ರತ್ವದಲ್ಲಿ ಶಿರ್ವ ಗ್ರಾ.ಪಂ ಮುಂಭಾಗದಲ್ಲಿ ಮನವಿ ಕೊಡುವ ಸಂದರ್ಭದಲ್ಲಿ ಅವರ ಮೇಲೆ ಹಲ್ಲೆಗೆ ಮುಂದಾಗಿ ಅವಮಾನ ಮಾಡಲಾಗಿದೆ.
Advertisement. Scroll to continue reading.
ಅಲ್ಲದೆ ಪ್ರತಿಭಟನಾ ಸ್ಥಳಕ್ಕೆ ಬಿಜೆಪಿಗರು ಬಂದು ಪ್ರತಿಭಟನೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಿ ಘೋಷಣೆ ಕೂಗುವ ಮೂಲಕ ಅವರ ದಲಿತ ವಿರೋಧಿ ನೀತಿ, ಬಡವರ ವಿರೋಧಿ ನೀತಿಯನ್ನು ಎತ್ತಿ ತೋರಿಸಿದ್ದಾರೆ ಎಂದು ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಜಿಲ್ಲಾಧಿಕಾರಿಯವರು ನಿಷ್ಪಕ್ಷಪಾತವಾದಂತ ತನಿಖೆ ನಡೆಸಿ ಬಡವರಿಗೆ ನ್ಯಾಯ ಒದಗಿಸಿಕೊಡಬೇಕು. ಮಾಜಿ ಸಚಿವರ ವಿರುದ್ಧ ನಡೆದ ಷಡ್ಯಂತ್ರ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ನಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.