ಬೆಂಗಳೂರು : ಕರ್ನಾಟಕ ಹಿಜಾಬ್ ವಿವಾದಕ್ಕೆ ಇದೀಗ ಅಲ್ ಖೈದಾ ಎಂಟ್ರಿ ಜೊಟ್ಟಿದೆ. ಭಯೋತ್ಪಾದಕ ಸಂಘಟನೆಯ ನಾಯಕ ಅಯ್ಮಾನ್ ಅಲ್ ಜವಾಹಿರಿ, ಹಿಜಾಬ್ ನಿಷೇಧದ ವಿರುದ್ಧ ಧ್ವನಿ ಎತ್ತುವಂತೆ ಭಾರತೀಯ ಮುಸ್ಲಿಮರಿಗೆ ಕರೆ ನೀಡಿದ್ದಾನೆ. ಅಲ್ಲದೃ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದ ಗುಂಪಿನ ಎದುರು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ನ್ನು ಶ್ಲಾಘಿಸುವ 9 ನಿಮಿಷಗಳ ವೀಡಿಯೊವನ್ನು ಜವಾಹಿರಿ ಬಿಡುಗಡೆ ಮಾಡಿದ್ದಾನೆ.
ಮುಸ್ಕಾನ್ ನನ್ನು ಹೊಗಳಿ ಕವನ ಓದಿರುವ ಜವಾಹಿರಿಯ ಈ ವೀಡಿಯೊವನ್ನು ಅಲ್ ಖೈದಾದ ಅಧಿಕೃತ ಶಬಾಬ್ ಮೀಡಿಯಾ ಬಿಡುಗಡೆ ಮಾಡಿದೆ. ಇದನ್ನೂ SITE ಇಂಟೆಲಿಜೆನ್ಸ್ ಗ್ರೂಪ್ ಕೂಡಾ ದೃಢಪಡಿಸಿದೆ. ಒಸಾಮಾ ಬಿನ್ ಲಾಡೆನ್ ನಂತರ ಅಲ್ ಖೈದಾ ನಾಯಕನಾದ ಜವಾಹಿರಿ ಕರ್ನಾಟಕ ಕಾಲೇಜು ವಿದ್ಯಾರ್ಥಿ ಮುಸ್ಕಾನ್ ಖಾನ್ ನನ್ನು ಮುಕ್ತಕಂಠದಿಂದ ಹೊಗಳಿದ್ದಾನೆ. ಬಿಡುಗಡೆ ಮಾಡಿದ ವಿಡಿಯೋಗೆ ನೋಬಲ್ ವುಮನ್ ಆಫ್ ಇಂಡಿಯಾ ಎಂದು ಶೀರ್ಷಿಕೆ ನೀಡಲಾಗಿದೆ.
ಸಾಮಾಜಿಕ ಮಾಧ್ಯಮದ ಮೂಲಕ ಮುಸ್ಕಾನ್ ಬಗ್ಗೆ ತಿಳಿದಿದೆ ಎಂದು ವಿಡಿಯೋದಲ್ಲಿ ಜವಾಹಿರಿ ಹೇಳಿದ್ದು, ಈ ಸಹೋದರಿ ತಕ್ಬೀರ್ ಧ್ವನಿಯನ್ನು ಎತ್ತುವ ಮೂಲಕ ನನ್ನ ಹೃದಯವನ್ನು ಗೆದ್ದಿದ್ದಾಳೆ ಎಂದಿದ್ದಾನೆ. ಅಲ್ಲದೆ, ಮುಸ್ಕಾನ್ ಹೊಗಳಿಕೆಯಲ್ಲಿ ಕವನ ಓದುತ್ತಿರುವುದಾಗಿಯೂ ಹೇಳಿ ಕವನ ವಾಚಿಸಿದ್ದಾನೆ.
Advertisement. Scroll to continue reading.
ಅಲ್ಲದೆ ಕವಿತೆಯನ್ನು ಓದಿದ ನಂತರ, ಹಿಜಾಬ್ ಅನ್ನು ನಿಷೇಧಿಸಿದ ದೇಶಗಳ ಮೇಲೆ ವಾಗ್ದಾಳಿ ನಡೆಸಿದ್ದಾನೆ. ಈ ರಾಷ್ಟ್ರಗಳು ಪಾಶ್ಚಿಮಾತ್ಯ ದೇಶಗಳ ಮಿತ್ರರಾಷ್ಟ್ರಗಳು ಎಂದು ಕರೆದಿದ್ದಾನೆ.