ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಹೊಸೂರು ಗ್ರಾಮದ ಕರ್ಜೆ ಕೆಳಕಂಪದ ರೇವತಿ 28 ವರ್ಷ. 27.03 ರಂದು ರಾತ್ರಿ ಮನೆಯಲ್ಲಿ ಮಲಗಿದ್ದವಳು ಮನೆ ಬಿಟ್ಟು ಹೋಗಿರುತ್ತಾಳೆ.
ಮನೆಯ ಸುತ್ತ ಮುತ್ತ ನೆರೆ-ಕೆರೆಯವರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದರೂ ಈ ತನಕ ಪತ್ತೆಯಾಗಿಲ್ಲ ಎಂದು ಬ್ರಹ್ಮಾವರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರೇವತಿಯ ಗಂಡ ಟಿ.ಬಿ ಖಾಯಿಲೆಯಿಂದ ಮೃತ ಪಟ್ಟಿದ್ದು, ಆಕೆಗೆ ಮಕ್ಕಳಿರುವುದಿಲ್ಲ. ಗಂಡ ಮೃತಪಟ್ಟ ನಂತರ ಮಾನಸಿಕ ಅಸ್ವಸ್ಥಳಾಗಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರೂ ಸಂಪೂರ್ಣ ಗುಣಮುಖಳಾಗಿರುವುದಿಲ್ಲ. ಕಾಣೆಯಾದ ರೇವತಿಯನ್ನು ಪತ್ತೆ ಮಾಡಿಕೊಡುವಂತೆ ಆಕೆಯ ತಂದೆಯ ಎರಡನೆ ಹೆಂಡತಿ ಸಹನಾ ಬಾಯಿ ಬ್ರಹ್ಮಾವರ ಠಾಣಾಧಿಕಾರಿ ಗುರುನಾಥ ಬಿ ಹಾದಿಮನಿ ಯವರಿಗೆ ದೂರು ದಾಖಲಿಸಿದ್ದು ಅವರ ಬಗ್ಗೆ ಯಾರಿಗಾದರೂ ಕಂಡು ಬಂದಲ್ಲಿ ಬ್ರಹ್ಮಾವರ ಪೋಲೀಸ್ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.
ಬಿಳಿ ಮೈ ಬಣ್ಣ ದುಂಡು ಮುಖ ಸಪೂರ ಶರೀರ 5 ಅಡಿ ಎತ್ತರ ಹಸಿರು ಬಣ್ಣದ ಚೂಡಿದಾರ್ ದರಿಸಿದ್ದು ಕನ್ನಡ ಮತ್ತು ಮರಾಠಿ ಭಾಷೆ ಮಾತನಾಡುತ್ತಾರೆ.
Advertisement. Scroll to continue reading.