ಕರಾವಳಿ

ಉಡುಪಿ : ಫ್ರಾನ್ಸ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಮಾಧುರ್ಯ ಶೆಟ್ಟಿಗೆ ಬೆಂಗಳೂರು ಬಂಟರ ಸಂಘದ ವತಿಯಿಂದ 50,000 ರೂ.ವಿತರಣೆ

2

ಬ್ರಹ್ಮಾವರ : ಫ್ರಾನ್ಸ್ ನಲ್ಲಿ ನಡೆಯಲಿರುವ ಅಂತರ್ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಉಡುಪಿ-ಅಜ್ಜರಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಮಾಧುರ್ಯ ಶೆಟ್ಟಿ ಅವರಿಗೆ ಬೆಂಗಳೂರು ಬಂಟರ ಸಂಘದ ವತಿಯಿಂದ 50,000/- ರೂಪಾಯಿಗಳನ್ನು ನೀಡಿ ಶುಭ ಹಾರೈಸಿದರು.

ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ , ಖಜಾಂಜಿ ದೀಪಕ್ ಶೆಟ್ಟಿ ಬಾರಕೂರು , ಕ್ರೀಡಾ ಸಮಿತಿಯ ರಾಧಾಕೃಷ್ಣ ಶೆಟ್ಟಿ,

ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ , ಮಾಧುರ್ಯ ಶೆಟ್ಟಿಯ ಪೋಷಕರು ದೈಹಿಕ ಶಿಕ್ಷಕ ಸಂಘದ ಪಧಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರುಗಳು ಉಪಸ್ಥಿತರಿದ್ದರು.

Advertisement. Scroll to continue reading.

ಈಕೆ ಕ್ರೀಡೆಯಲ್ಲಿ ಹಲವಾರು ಕಡೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದವಳಾಗಿದ್ದು ಗ್ರಾಮೀಣ ಭಾಗವಾದ ಹಿಲಿಯಾಣದ ತಂದೆ ಕೃಷ್ಣ ಮೂರ್ತಿ ಶೆಟ್ಟಿ ಗಾರೆ ಕೆಲಸ ಮಾಡಿಕೊಂಡು 3 ಹೆಣ್ಣು ಮಕ್ಕಳ ವಿದ್ಯಾಬ್ಯಾಸಕ್ಕೆ ದಂಪತಿಗಳ ಕೂಲಿ ಕೆಲಸವೆ ಜೀವನಾಧಾರವಾಗಿದ್ದು ಮಾಧುರ್ಯ ಅವರೀಗೆ ಆರ್ಥಿಕ ನೆರವು ನೀಡುವವರು ಅವರ ಕೆನರಾ ಬ್ಯಾಂಕ್ ಬೆಳ್ವೆ ಶಾಖೆ ಖಾತೆ ಸಂಖ್ಯೆ 0647108056741 ಐ ಎಫ್ ಎಸ್ ಸಿ ಸಂಖ್ಯೆ ಸಿ ಎನ್ ಆರ್ ಬಿ0000647 ಇಲ್ಲಿಗೆ ಹಣ ಸಂದಾಯ ಮಾಡಬಹುದು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com