ಬಾರಕೂರು : ಕಚ್ಚೂರು ಶ್ರೀ ಮಾಲ್ತೀದೇವಿ ದೇವಸ್ಥಾನ, ಶ್ರೀಬಬ್ಬುಸ್ವಾಮಿ ಮೂಲಕ್ಷೇತ್ರ ವಾರ್ಷಿಕ ಜಾತ್ರಾ ಮಹೋತ್ಸವ; ಹಸಿರು ಹೊರೆ ಕಾಣಿಕೆ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಕಚ್ಚೂರು ಶ್ರೀ ಮಾಲ್ತೀದೇವಿ ದೇವಸ್ಥಾನ ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರ ಬಾರಕೂರು ಇಲ್ಲಿ ಏಪ್ರಿಲ್ 15 ರಿಂದ 19 ರ ತನಕ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ಗೆಂಡೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಶುಕ್ರವಾರ ನಾನಾ ಭಾಗದಿಂದ ಹಸಿರು ಹೊರೆ ಕಾಣಿಕೆ ಹಲವಾರು ವಾಹನಗಳಿಂದ ಬಾರಕೂರು ಕಲ್ಲು ಚಪ್ಪರದಿಂದ ರಥ ಬೀದಿ ಮೂಲಕ ಮಾಲ್ತೀ ದೇವಸ್ಥಾನಕ್ಕೆ ತಲುಪಿತು.
ಡೋಲು, ಚಂಡೆ, ಮಹಿಳೆಯರಿಂದ ಪೂರ್ಣಕುಂಭ , ನಾನಾ ಟ್ಯಾಬ್ಲೊಗಳು ಮೆರವಣಿಗೆಯ ಕಳೆ ಹೆಚ್ಚಿಸಿತ್ತು. ದೇವಸ್ಥಾನದ ಆಡಳಿತ ಧರ್ಮದರ್ಶಿ ಗೋಕುಲ್ ದಾಸ್ ಬಾರಕೂರು , ಅಧ್ಯಕ್ಷ ಶಿವಪ್ಪ ನಂತೂರು , ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಬಾರಕೂರು , ಖಜಾಂಚಿ ಉದಯ ಅಂಚನ್ ಎರ್ಮಾಳ್ , ಗುರಿಕಾರ ಕಮಲಾಕ್ಷ ಬಾರಕೂರು , ಅರ್ಚಕರಾದ ಪ್ರಭಾಕರ ಕಚ್ಚೂರು ಸೇರಿದಂತೆ ನಾನಾ ಭಾಗದ ಗುರಿಕಾರರು ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಮೆರವಣಿಗೆಯಲ್ಲಿದ್ದರು.