ಕರಾವಳಿ

ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚ ಕುಂದಾಪುರ: ಪೋಷಣಾ ಅಭಿಯಾನ

3

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ : ಕುಂದಾಪುರ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮ ಮಂಡಲದ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಗೋಪಾಡಿ ನಿವಾಸದಲ್ಲಿ ನಡೆಯಿತು.

ಮಂಡಲದ ಕ್ಷೇತ್ರಧ್ಯಕ್ಷ ಶಂಕರ್ ಅಂಕದಕಟ್ಟೆ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾದ ಪೋಷಣಾ ಅಭಿಯಾನದಲ್ಲಿ ಇವತ್ತಿನ ಅಮೂಲ್ಯವಾದ ದಿವಸ ಎಂದರೂ ಕೂಡ ತಪ್ಪಾಗಲಾರದು, ದೇಶಕ್ಕೆ ಮಾರಕರೋಗ ಬಂದಾಗ ಆಶಾ ಕಾರ್ಯಕರ್ತರ ಸೇವೆ ನೆನಪಿಸಿಕೊಳ್ಳಬೇಕಾಗಿದ್ದು, ಜೀವದ ಹಂಗನ್ನು ತೊರೆದು ಪ್ರತಿ ಮನೆ ಮನೆಗೆ ಭೇಟಿ ನೀಡಿ ಆರೋಗ್ಯದ ಕಡೆ ಗಮನ ಕೊಡಿ ಎಂದು, ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮನೆ ಮನೆಗೆ ಸಾರ್ವಜನಿಕರಿಗೆ ಮಾರಕ ರೋಗದ ಬಗ್ಗೆ ಅರಿವು ಮೂಡಿಸಿದ್ದು ಶ್ಲಾಘನೀಯ ಎಂದರು.

Advertisement. Scroll to continue reading.

ಈ ಸಂದರ್ಭ ಗೋಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಆಶಾ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದ ಶೋಭಾ, ವೈಲೆಟ್ ಬರೆಟ್ಟೋ ಮತ್ತು ಶ್ಯಾಮಲಾರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ ವಕ್ವಾಡಿ, ಮಹಿಳಾ ಮೋರ್ಚಾದ ಅಧ್ಯಕ್ಷೆ ರೂಪ ಪೈ, ಪ್ರಧಾನ ಕಾರ್ಯದರ್ಶಿಗಳಾದ ಅನಿತಾ ಶ್ರೀಧರ್, ಸೌರಬಿ. ಪೈ, ಮಂಡಲದ ಕಾರ್ಯದರ್ಶಿ ಸುರೇಂದ್ರ ಸಂಗಮ್, ಆಶಾಲತಾ ನಾಯಕ್, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರು, ಬೀಜಾಡಿ ಮಹಾಶಕ್ತಿ ಕೇಂದ್ರದ ಪ್ರಭಾರಿ ಸುಧೀರ್ ಕೆ.ಎಸ್. ಬೀಜಾಡಿ ಜಿಲ್ಲಾ ಪಂಚಾಯಿತಿನ ನಿಕಟಪೂರ್ವ ಸದಸ್ಯೆ ಲತಾ ಸುರೇಶ್ ಶೆಟ್ಟಿ , ಗೋಪಾಡಿ ಪಂಚಾಯಿತಿನ ಸದಸ್ಯೆ ನೇತ್ರಾವತಿ ಮಡಿವಾಳ, ಸಾವಿತ್ರಿ ಹಾಗೂ ಮಹಿಳಾ ಮೋರ್ಚಾ ದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕುಂದಾಪುರ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ರೂಪ ಪೈ ಪ್ರಸ್ತಾವಿಕ ಮಾತುಗಳನ್ನಾಡಿದರು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com