ಹಿರಿಯಡಕ ಶ್ರೀವೀರಭದ್ರಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವ: 30,000ಕ್ಕೂ ಅಧಿಕ ಸೀಯಾಳ ಸಮರ್ಪಣೆ; ಭಕ್ತರಿಗೆ ಉಚಿತ ಹಂಚಿಕೆ
Published
1
ವರದಿ : ಬಿ.ಎಸ್.ಆಚಾರ್ಯ
ಹಿರಿಯಡಕ : ದೇವಸ್ಥಾನ, ಜಾತ್ರೆ, ರಥೋತ್ಸವ ಅಂದರೆ ಅದೊಂದು ಭಕ್ತಿಯ ಕೇಂದ್ರದ ಜೊತೆ ಸಾಮೂಹಿಕ ಶ್ರಮ ಮತ್ತು ಸೇವೆಯೊಂದಿಗೆ ಪುಣ್ಯ ಪ್ರಾಪ್ತಿಯ ತಾಣ. ಸಮಗ್ರ ಜಿಣೋದ್ಧಾರಗೊಂಡ ಕಾರಣಿಕದ ಉಡುಪಿ ಜಿಲ್ಲೆಯ ಮಹಾತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಹಿರಿಯಡಕದಲ್ಲಿ 16 ರಿಂದ 21 ರ ತನಕ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ರಥೋತ್ಸವ ಇನ್ನಿತರ ಕಾರ್ಯಕ್ರಮ ಜರುಗಿತು.
ಹಲವಾರು ದೇವಸ್ಥಾನದಲ್ಲಿ ತೀರ್ಥ, ಪ್ರಸಾದ, ಪಂಚಕಜ್ಜಾಯ , ಲಡ್ಡು ಅನ್ನ ಪ್ರಸಾದವಾದರೆ ಈ ದೇವಸ್ಥಾನದಲ್ಲಿ ಭಕ್ತರೀಗೆ ವಿಶೇಶ ಇದೆ . ದೇವರೀಗೆ ಸೇವೆ ಮತ್ತು ಹರಕೆ ರೂಪದಲ್ಲಿ ಭಕ್ತರು ಇಲ್ಲಿ ಸಿಯಾಳವನ್ನು ನೀಡುತ್ತಾರೆ. ದೇವರಿಗೆ ನೀಡಿದ ಸಿಯಾಳವನ್ನು ಸಮರ್ಪಣೆಯಾದ ಬಳಿಕ ದೇವರಿಗೆ ನಿಗದಿತವಾಗಿ ಬೇಕಾಗುವ ಅಭಿಷೇಕಕ್ಕಿಂತ ಹೆಚ್ಚು ಉಳಿಕೆ ಯಾದ ಸೀಯಾಳವನ್ನು ದೇವಸ್ಥಾನದ ಹೊರ ಸುತ್ತಿನ ಒಂದು ಭಾಗದಲ್ಲಿ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಉಚಿತವಾಗಿ ನೀಡಲಾಗುತ್ತದೆ.
ಈ ವರ್ಷ ಜಾತ್ರೆಗೆ 30,000 ಸೀಯಾಳ ಬಂದಿದ್ದು ಕಳೆದ 6 ದಿನದಲ್ಲಿ ಸಹಸ್ರಾರು ಭಕ್ತರು ಕಲ್ಪವೃಕ್ಷದ ಜೀವಾಮೃತವನ್ನು ಉಚಿತವಾಗಿ ಸವಿದಿದ್ದಾರೆ.
ಸೀಯಾಳದ ನೀರನ್ನು ತೆಗೆದು ಸಂಸ್ಕರಣೆ ಮಾಡಲು ಇದಕ್ಕಾಗಿಯೇ ದೇವಸ್ಥಾನದ ನೂರಾರು ಸ್ವಯಂ ಸೇವಕರು ಹಗಲಿರುಳು ಎನ್ನದೆ ಸರತಿಯಂತೆ ತಮ್ಮ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.
ತಾಪಮಾನದ ಹೆಚ್ಚಳದ ಇಂದಿನ ದಿನದಲ್ಲಿ ಒಂದು ಸಿಯಾಳಕ್ಕೆ 40 ರೂ. ನೀಡಿದರೂ ಸಿಗದ ದಿನದಲ್ಲಿ ದೇವಸ್ಥಾನಗಳು ಭಕ್ತರಿಂದ ಭಕ್ತರಿಗಾಗಿ ಮಾಡುವ ಇದೊಂದು ವಿನೂತನ ಸೇವೆ ಮಾದರಿಯಾಗಿದೆ.
ಶ್ರೀಕ್ಷೇತ್ರದಲ್ಲಿ ಹುಣ್ಣಿಮೆಯಂದು ನಡೆದ ಸಿರಿ ಜಾತ್ರೆಯಂದು ಹರಕೆಯ ರೂಪದಲ್ಲಿ 30 ರಿಂದ 35,000 ಸೀಯಾಳದ ಸಮರ್ಪಣೆ ನಡೆಯುತ್ತದೆ. ದೇವರ ಅಭಿಷೇಕ ನಡೆದು ಮಿಕ್ಕಿದ ಸೀಯಾಳವನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಕೊಡಲಾಗುತ್ತದೆ. ವೀರಭದ್ರ ಸೇವಾ ಸಮಿತಿಯ ಎಲ್ಲಾ ಕಾರ್ಯಕರ್ತರು ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಾ, ಎಲ್ಲಾ ಭಕ್ತರಿಗೂ ಹಂಚುತ್ತಿದ್ದಾರೆ.ನಾಗರಾಜೇಂದ್ರ, ಸ್ವಯಂ ಸೇವಕರು, ಹಿರಿಯಡ್ಕ