ರಾಜ್ಯ

ಮೇ.16 ರಿಂದಲೇ ಶಾಲೆಗಳು ಆರಂಭ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

1

ಬೆಂಗಳೂರು : ಮೇ. 16 ರಿಂದ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಲಾಗಿದೆ. ಹೀಗಾಗಿ ಅಂದಿನಿಂದಲೇ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾದಿಂದಾಗಿ ಕಳೆದ ಎರಡೂವರೆ ವರ್ಷಗಳಿಂದ ಶಾಲೆಗಳು ಸರಿಯಾಗಿ ಭೌತಿಕ ತರಗತಿಗಳು ನಡೆದಿಲ್ಲ. ವಿದ್ಯಾರ್ಥಿಗಳು ಸಹ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಹೀಗಾಗಿ ಮೇ. 16 ರಿಂದಲೇ ಭೌತಿಕ ತರಗತಿಗಳನ್ನು ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಬಿಸಿಲು ಹೆಚ್ಚಾಗಿರುವ ಭಾಗಗಳಲ್ಲಿ ಶಾಲೆ ಆರಂಭಿಸದಂತೆ ಪಾಲಕರು ಮನವಿ ಮಾಡಿಲ್ಲ. ಸದ್ಯಕ್ಕೆ ಶಾಲೆ ಆರಂಭದ ದಿನಾಂಕವನ್ನು ಮುಂದೂಡುವ ಬಗ್ಗೆ ಯೋಚನೆ ಮಾಡಿಲ್ಲ.

Advertisement. Scroll to continue reading.

ಮಳೆಗಾಲವಾದ್ದರಿಂದ ವೆದರ್ ರಿಪೋರ್ಟ್ ವೆರಿ ಕ್ರಿಟಿಕಲ್ ಎಂದು ವೆದರ್ ಡಿಪಾರ್ಟ್ ಮೆಂಟ್‍ನಿಂದ ಏನಾದರು ಮಾಹಿತಿ ಬಂದರೆ ಮಾತ್ರ ಬೇರೆ ಬದಲಾವಣೆ ಮಾಡಲಾಗುವುದು. ಕೋವಿಡ್ 4ನೇ ಅಲೆ ಬಗ್ಗೆ ಯಾವುದೇ ತೀರ್ಮಾನ ಈಗ ಕೈಗೊಳ್ಳೋಕೆ ಆಗಲ್ಲ. ಆ ರೀತಿಯ ಯಾವ ವಿಚಾರವು ನಮಗೆ ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com