ನವದೆಹಲಿ : ಆಗ್ರಾದಿಂದ ನೊಯ್ಡಾಕ್ಕೆ ಹೋಗುವ ಯಮುನಾ ಎಕ್ಸ್ಪ್ರೆಸ್ವೇಯಲ್ಲಿ ಶನಿವಾರ ಬೆಳ್ಳಂಬೆಳಿಗ್ಗೆ 5 ಗಂಟೆಗೆ ಭೀಕರ ಅಪಘಾತ ಸಂಭವಿಸಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.
ಲಾಲು ಪ್ರಸಾದ್ (65), ಅವರ 60 ವರ್ಷದ ಪತ್ನಿ ಚುಟ್ಕಿ, ಅವರ ಕಿರಿಯ ಮಗ ರಾಜೇಶ್(25), ಸೊಸೆ ನಂದಿನಿ (23), 30 ವರ್ಷದ ಹಿರಿಯ ಮಗ ಸಂಜಯ್, ಅವರ ಪತ್ನಿ 28 ವರ್ಷದ ನಿಶಾ ಮತ್ತು ಆರು ವರ್ಷದ ಮೊಮ್ಮಗ ಧೀರಜ್ ಮೃತರೆಂದು ಗುರುತಿಸಲಾಗಿದೆ.
ಲಾಲು ಪ್ರಸಾದ್ ಅವರ ಕಿರಿಯ ಮಗ 23 ವರ್ಷದ ಗೋಪಾಲ್ ಮತ್ತು ಮೂರು ವರ್ಷದ ಮೊಮ್ಮಗ ಕ್ರಾಶ್ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿದ್ದಾರೆ.
Advertisement. Scroll to continue reading.
ಬೊಲೆರೊ ಕಾರಿನಲ್ಲಿ 7 ಮಂದಿ ಆಗ್ರಾದಿಂದ ನೋಯ್ಡಾಗೆ ಹೋಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು, ಬೊಲೆರೋ ಕಾರು ಡಂಪರ್ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದವರು ಗಾಯಗೊಂಡಿದ್ದರು.
ಗಾಯಾಳುಗಳನ್ನು ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದರಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಉಳಿದಂತೆ ಗಂಭೀರವಾಗಿ ಗಾಯಗೊಂಡಿರುವ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗುತ್ತಿದೆ.
Advertisement. Scroll to continue reading.