ತುಮಕೂರು : ಮೂರು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಾಯಸಂದ್ರ ಹೋಬಳಿಯ ಶೆಟ್ಟಿಗೊಂಡನ ಹಳ್ಳಿ ಬಳಿ ನಡೆದಿದೆ.
ಹಿಂಡಿಸ್ಕೆರೆಯ ರಂಗನಾಥ (25), ಚಿಕ್ಕನಾಯಕನಹಳ್ಳಿ ತಾಲೂಕಿನ ಬುಕ್ಕಾಪಟ್ಟಣದ ಗಿನ್ನಪ್ಪನಹಟ್ಟಿಯ ನವೀನ್ (25), ಭೂತೇಶ್ (25) ಮತ್ತು ಶಶಿಧರ್ ಮೃತಪಟ್ಟವರು.
ಎಡೆಯೂರು ಕಡೆಗೆ ಹೊರಟಿದ್ದ ಬೈಕ್ ಗಳಿಗೆ ಸಿ.ಎಸ್.ಪುರದಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Advertisement. Scroll to continue reading.
ಈ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.