ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಆಸ್ತಿಗಾಗಿ ಪತ್ನಿ, ಮಗ ಹಾಗೂ ಗೆಳೆಯನೊಂದಿಗೆ ಸೇರಿಕೊಂಡು ಪತಿಯ ಹತ್ಯೆ ನಡೆಸಲು ಯತ್ನಿಸಿರುವ ಘಟನೆ ಮುದ್ರಾಡಿ ಗ್ರಾಮದ ಸುಬ್ಬಣ್ಣಕಟ್ಟೆ ಎಂಬಲ್ಲಿ ನಡೆದಿದೆ.
ಜಯಾನಂದ ಕಾಮತ್ ಎಂಬವರ ಪತ್ನಿ ಅಮಿತಾ ಕಾಮತ್, ಮಗ ದೀಕ್ಷಿತ್ ಹಾಗೂ ಪತ್ನಿಯ ಸ್ನೇಹಿತ ಮಂಜುನಾಥ ಕೃತ್ಯ ಎಸಗಿದವರು.
Advertisement. Scroll to continue reading.
ಜಯಾನಂದ ಕಾಮತ್ ಹೆಸರಿನಲ್ಲಿ ಪೆರ್ಡೂರಿನಲ್ಲಿ ಜಾಗವಿದ್ದು, ಆ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಡಬೇಕೆಂದು ಪತ್ನಿ ಅಮಿತಾ ಕಾಮತ್ ತಕರಾರು ಮಾಡುತ್ತಿದ್ದರು. ಈ ವಿಚಾರದಲ್ಲಿ ಗಂಡನ ಮೇಲೆ ಅಮಿತಾ ಅವರಿಗೆ ವೈಷಮ್ಯ ಇತ್ತು ಎನ್ನಲಾಗಿದೆ.
ಸುಮಾರು 3 ದಿನದಿಂದ ಅಮಿತಾ ಕಾಮತ್ ಇವರ ಸ್ನೇಹಿತ ಮಂಜುನಾಥ ಇವರ ಮನೆಯಲ್ಲಿಯೇ ಉಳಿದುಕೊಂಡಿದ್ದ ಎನ್ನಲಾಗಿದೆ. ಶನಿವಾರ ರಾತ್ರಿ 2-00 ಗಂಟೆಗೆ ಜಯಾನಂದ ಅಬರು ರೂಮ್ ನಲ್ಲಿ ಮಲಗಿಕೊಂಡಿರುವಾಗ ಅಲ್ಲಿಗೆ ಅವರ ಪತ್ನಿ, ಮಗ ದೀಕ್ಷಿತ್ ಮತ್ತು ಮಂಜುನಾಥ ಬಂದು ಪೆರ್ಡೂರಿನ ಜಾಗವನ್ನು ತನ್ನ ಹೆಸರಿಗೆ ಬರೆದು ಕೊಡುವುದಿಲ್ಲವಾ ಎಂದು ಅವಾಚ್ಯಶಬ್ದದಿಂದ ಬೈದು, ಬೈರಾಸಿನಿಂದ ಜಯಾನಂದ ಅವರ ಕಾಲು ಮತ್ತು ಕೈಗಳನ್ನು ಕಟ್ಟಿ ಅವರು ಅಲುಗಾಡದಂತೆ ಬಿಗಿಯಾಗಿ ಹಿಡಿದು ಕೊಂಡಿದ್ದು, ಅವರು ಬೊಬ್ಬೆ ಹಾಕಲು ಪ್ರಯತ್ನಿಸಿದಾಗ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಅವರ ಕುತ್ತಿಗೆಯನ್ನು ಕೈಯಿಂದ ಉಸಿರಾಡಲು ಅಗದ ರೀತಿಯಲ್ಲಿ ಬಿಗಿಯಾಗಿ ಹಿಡಿದುಕೊಂಡು ಅಲ್ಲಿಯೇ ಇದ್ದ ಬಟ್ಟೆಯ ದಿಂಬಿನಿಂದ ಅವರು ಉಸಿರಾಡಲು ಅಗದ ರೀತಿಯಲ್ಲಿ ಮುಖಕ್ಕೆ ಒತ್ತಿ ಹಿಡಿದು ಸಾಯಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಮಂಜುನಾಥ ಮತ್ತು ದೀಕ್ಷಿತ್ ನ್ನು ಎದೆಯ ಮೇಲೆ ಕುಳಿತು ಕೊಂಡಿದ್ದಾರೆ. ಈ ವೇಳೆ ಜಯಾನಂದ ಅವರು ಅಮಿತಾರಲ್ಲಿ ಜಾಗವನ್ನು ನಿನ್ನ ಹೆಸರಿಗೆ ಬರೆದು ಕೊಡುತ್ತೇನೆಂದು ಹೇಳಿದಾಗ ಆಜೆ ಸಹಿಯನ್ನು ಒಂದು ಖಾಲಿ ಪೇಪರ್ ನಲ್ಲಿ ಪಡಕೊಂಡಿದ್ದಾರೆ. ಅಲ್ಲದೇ, ಅವರುಗಳು ಏನಾದರೂ ಅಟವಾಡಿದರೆ ಇಲ್ಲಿಯೇ ಕೊಂದು ಬಿಡುತ್ತೇನೆಂದು ಜೀವ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ದೂರಲಾಗಿದೆ.
ಈ ವೇಳೆ ತುಟಿಯ ಬಳಿ ಮತ್ತು ಎದೆಯ ಬಳಿ ನೋವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.