ಪರ್ಕಳ : ದೇವಿ ನಗರದಲ್ಲಿ ಮತ್ತೆ ಮತ್ತೆ ಉಪಟಳ ನೀಡುವ ಆಫ್ರಿಕನ್ ತಳಿ ಬಸವನ ಹುಳು!
Published
0
ಪರ್ಕಳ : ದೇವಿ ನಗರ ಒಂದು ಹಾಗೂ ಎರಡನೇ ಕ್ರಾಸ್ ನಲ್ಲಿ ಇರುವ ಹೆಚ್ಚಿನ ಮನೆಗಳಲ್ಲಿ ಮಳೆ ಬಂದಾಗ ಬಸವನ ಹುಳು ಆಫ್ರಿಕನ್ ತಳಿಯ ಬಾಧೆ ಮತ್ತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಪರ್ಕಳದ ಸಮೀಪ ಮುಂದುವರಿದು ಇದೀಗ ಪರ್ಕಳ ಬಿಎಂ ಸ್ಕೂಲ್ ನ ಪಾಗರ, ಪುಟಾಣಿಗಳ ಅಂಗನವಾಡಿಯ ಗೋಡೆಗಳ ಮೇಲೆ ಹಾಗೂ ಪರ್ಕಳ ದೇವಿ ನಗರದ ಅಬ್ದುಲ್ ಸತ್ತಾರ್ ಅವರ ಮನೆಯ ಕಂಪೌಂಡ್ ಸುತ್ತಲೂ ಆಫ್ರಿಕನ್ ಮಾದರಿಯ ಬಸನ ಹುಳು ಬಾದೆ ಕಂಡು ಬಂದಿದೆ. ಅಬ್ದುಲ್ ಸತ್ತಾರ್ ಅವರು ಹೇಳುವ ಪ್ರಕಾರ, ಕಳೆದ ವರ್ಷ ನಾವು 9 ಗೋಣಿ ಕಲ್ಲು ಉಪ್ಪು ಬಳಸಿದ್ದೇವೆ. ಆದರೂ ಕೂಡ ಈ ಹುಳ ಉಪಟಲ ಕೊನೆಗೊಂಡಿಲ್ಲ. ಈ ವರ್ಷ ಮಳೆ ಆರಂಭವಾದಾಗ, ನಮ್ಮ ಮನೆಯ ಗೋಡೆಯಲ್ಲಿ ಹರಡುತ್ತಿದ್ದು ಕಂಡುಬಂದಿದೆ. ಮನೆಯ ಗಿಡಗಂಟೆಗಳನ್ನು ತಿನ್ನಲು ಶುರು ಮಾಡಿದೆ. ಈ ಪರಿಸರದಲ್ಲಿ ಮತ್ತೆ ಮತ್ತೆ ಈ ಬಸವನ ಹುಳುವಿನಿಂದ ತೊಂದರೆಯಾಗುತ್ತಿದ್ದು, ಕಳೆದ ವರ್ಷ ನಗರಸಭೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ಇರುವುದರಿಂದ ಈ ಬಾರಿ ಹುಳ ಉಪಟಳದಿಂದ ಮತ್ತೆ ತೊಂದರೆ ಸಾರ್ವಜನಿಕರೆಲ್ಲರೂ ಅನುಭವಿಸಬೇಕಾಗಿದೆ.
ಇದೀಗ ಪರ್ಕಳ ಬಿ.ಎಂ. ಶಾಲೆಯ ಹಾಗೂ ಅಂಗನವಾಡಿಯ ಗೋಡೆಯಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.ಮುನ್ನೆಚ್ಚರಿಕೆ ಕ್ರಮ ಅಗತ್ಯ ಎಂದಿದ್ದಾರೆ.
ಈ ಹುಳವು ಸುರಿಸುವ ಎಂಜಲು ಬಲು ವಾಸನೆಯಿಂದ ಕೂಡಿದ್ದು, ಪರಿಸರ ಎಲ್ಲಾ ವಾಸನೆಯಿಂದ ಕೂಡಿರುತ್ತದೆ. ಮತ್ತೆ ರಾತ್ರಿಯ ಹೊತ್ತು ಶಬ್ದ ಮಾಡುತ್ತದೆ. ಮಳೆ ಬಂದಾಗ ಭೂಮಿಯ ಮೇಲೆ ಸಂಚರಿಸುತ್ತದೆ. ರಾತ್ರಿ ಹೊತ್ತು ಸಂಚಾರ ಜಾಸ್ತಿಯಾಗಿರುತ್ತದೆ. ಮನೆಯ ಒಳಗೆ ಎಲ್ಲಾ ಬರುತ್ತದೆ. ಹಾಗಾಗಿ ಉಡುಪಿಯ ನಗರಸಭೆಯ ಆರೋಗ್ಯ ಅಧಿಕಾರಿಗಳು ಈ ಹುಳು ಬಾಧೆಗೆ ಕೀಟನಾಶಕವನ್ನು ಸಿಂಪಡಿಸಿ, ಪೂರ್ಣಪ್ರಮಾಣದ ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತರು ಗಳಾದ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ರಾಜೇಶ್ ಪ್ರಭು ಪರ್ಕಳ ಆಗ್ರಹಿಸಿದ್ದಾರೆ.