ಬ್ರಹ್ಮಾವರ : ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ : ಲೋಕ ಕಲ್ಯಾಣಾರ್ಥ ಸೀಯಾಳಾಭಿಷೇಕ, ಕ್ಷೀರಾಭಿಷೇಕ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಲೋಕ ಕಲ್ಯಾಣಾರ್ಥ ಮತ್ತು ಸುಭಿಕ್ಷೆಗಾಗಿ ಬ್ರಹ್ಮಾವರ ಬಂಟರ ಸಂಘದವರು ಕರೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ನಾನಾ ಭಾಗದ ಭಕ್ತರಿಂದ ಸೀಯಾಳಾಭಿಷೇಕ, ಕ್ಷೀರಾಭಿಷೇಕ ಸಾರ್ವಜನಿಕವಾಗಿ ಜರುಗಿತು.
ಸಾರ್ವಜನಿಕರು ನೂರಾರು ಮಂದಿ ಈ ಹಿನ್ನೆಲೆಯಲ್ಲಿ ಪ್ರತೀಯೊಬ್ಬರು 1000 ಕ್ಕಿಂತ ಹೆಚ್ಚು ಸಿಯಾಳವನ್ನು ತಂದು ನೀಡಿ ಶಿವನ ಕೃಪೆಗೆ ಪಾತ್ರರಾದರು.
ಬ್ರಹ್ಮಾವರ ವೃತ್ತ ನೀರೀಕ್ಷಕರಾದ ಅನಂತಪದ್ಮನಾಭ ರವರು ಕೂಡಾ ಅವರ ಸಿಬ್ಬಂದಿಯವರ ಜೊತೆ ಆಗಮಿಸಿ ಸೀಯಾಳವನ್ನು ನೀಡಿದರು.
Advertisement. Scroll to continue reading.
ಅಭೀಷೇಕವಾದ ಸಿಯಾಳದ ನೀರನ್ನು ಭಕ್ತರಿಗೆ ಪ್ರಸಾದ ರೀತಿಯಲ್ಲಿ ನೀಡಲಾಯಿತು.
ಬಂಟ ಸಂಘದ ಅಧ್ಯಕ್ಷ ಮೈರ್ಮಾಡಿ ಸುಧಾಕರ ಶೆಟ್ಟಿ , ಪಧಾಧಿಕಾರಿಗಳಾದ ಶೇಡಿಕೊಡ್ಲು ವಿಠಲ್ ಶೆಟ್ಟಿ , ಬೈಕಾಡಿ ಸುಪ್ರಸಾದ್ ಶೆಟ್ಟಿ , ನಿತ್ಯಾನಂದ ಶೆಟ್ಟಿ ಹಾರಾಡಿ , ದಿನಕರ ಶೆಟ್ಟಿ ಬೈಕಾಡಿ, ನಡೂರು ನಿತ್ಯಾನಂದ ಶೆಟ್ಟಿ, ಬಿರ್ತಿ ರಾಜೇಶ್, ಸುಗ್ಗಿ ಸುಧಾಕರ ಶೆಟ್ಟಿ ಮೇದಿನಿ ಜಯರಾಮ್ ಶೆಟ್ಟಿ ಸೇರಿದಂತೆ ಅನೇಕ ಪಧಾಧಿಕಾರಿಗಳು ಹಾಜರಿದ್ದರು.