ಬೆಂಗಳೂರು: ನಟ ದಿಗಂತ್ ಗೋವಾದಲ್ಲಿ ಪಲ್ಟಿ ಹೊಡೆಯುವ ಸಮಯ ಗಾಯಗೊಂಡು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಆಪರೇಷನ್ ಯಶಸ್ವಿಯಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಟ ದಿಗಂತ್ ಅವರಿಗೆ ಸರ್ಜರಿ ಮುಗಿದಿದ್ದು, ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಈ ವೇಳೆ ಅವರು ತಾವು ಚೇತರಿಸಕೊಳ್ಳುತ್ತಿರುವುದಾಗಿ ಥಂಬ್ಸ್ ಅಪ್ ಮಾಡಿದ್ದಾರೆ.
ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ಜೊತೆಗೆ ಗೋವಾಕ್ಕೆ ಫ್ಯಾಮಿಲಿ ಟ್ರಿಪ್ ಹೋಗಿದ್ದರು. ಈ ವೇಳೆಯಲ್ಲಿ ಸಮುದ್ರದ ತಟದಲ್ಲಿ ಪಲ್ಟಿ ಹೊಡೆಯುವಂತ ವೇಳೆಯಲ್ಲಿ ಆಯತಪ್ಪಿ ಬಿದ್ದು, ಕುತ್ತಿಗೆಗೆ ಗಾಯವಾಗಿತ್ತು. ಅವರನ್ನು ಗೋವಾದಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿತ್ತು.
Advertisement. Scroll to continue reading.