ಬ್ರಹ್ಮಾವರ : ರೋಟರಿ ಭವನದಲ್ಲಿ ಕಳೆದ 300 ದಿನದಿಂದ ನಿರಂತರವಾಗಿ ಬೆಳಿಗ್ಗೆ 5.15 ನಿಮಿಷದಿಂದ 6 -20 ರತನಕ ಉಚಿತವಾಗಿ ನಡೆಯುತ್ತಿರುವ ಯೋಗ ಗುರು ಗೋಪಾಲಕೃಷ್ಣ ದೀಕ್ಷಿತ್ ಮತ್ತು ಪ್ರಿಯಾಂಕ ಇವರ ಶ್ರೀಕೃಷ್ಣ ಯೋಗ ಕೇಂದ್ರದ ವಿದ್ಯಾರ್ಥಿಗಳಿಂದ ಮಂಗಳವಾರ ಸಂಜೆ ಯೋಗ ಪ್ರದರ್ಶನ ಜರುಗಿತು.
ರೋಟರಿ ಅಧ್ಯಕ್ಷ ಹರೀಶ್ ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ, ಮಾನವರ ಶರೀರದ ಆರೋಗ್ಯಕ್ಕಾಗಿ ಭಾರತದ ಪ್ರಾಛೀನ ಋಷಿ ಮುನಿಗಳು ಕಂಡುಕೊಂಡ ಯೋಗ ಇಂದು ಪ್ರಧಾನಿ ನರೇಂದ್ರ ಮೋದಿಯವ ಮೂಲಕ ವಿಶ್ವದಾದ್ಯಂತ ಪಸರಿಸಿದೆ ನಮ್ಮ ರೋಟರಿ ಭವನದಲ್ಲಿ ನಿರಂತರವಾಗಿ ಉಚಿತವಾಗಿ ನಡೆಸಿಕೊಡುವ ಯೋಗ ಗುರು ದಂಪತಿಗಳು ಪರೋಕ್ಷವಾಗಿ ಮಾನವರಿಗೆ ಇದೊಂದು ಮಹತ್ತರ ಸೇವೆ ಎಂದರು.
ಪ್ರತೀ ದಿನ ಯೋಗಕೇಂದ್ರಕ್ಕೆ ಬರುವ ಯೋಗ ಪಟುಗಳು ಅನಿಸಿಕೆ ವ್ಯಕ್ತ ಪಡಿಸಿದರು.
Advertisement. Scroll to continue reading.
ಇದೇ ಸಂದರ್ಭದಲ್ಲಿ ಯೋಗ ಗುರು ದಂಪತಿಯನ್ನು ಮತ್ತು ರೋಟರಿ ಅಧ್ಯಕ್ಷರನ್ನು ಯೋಗ ವಿದ್ಯಾರ್ಥಿಗಳು ಗುರು ಕಾಣಿಕೆ ರೂಪದಲ್ಲಿ ಸನ್ಮಾನಿಸಿದರು.
ರೋಟರಿ ಕಾರ್ಯದರ್ಶಿ ಸತೀಶ್ ಶೆಟ್ಟಿ ರುಡ್ ಸೆಟ್ ನ ಹಿರಿಯ ಉಪನ್ಯಾಸಕ ಕರುಣಾಕರ ಜೈನ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಮಹಿಳೆಯರು, ಪುರುಷರು ಹಾಗೂ ವಿದ್ಯಾರ್ಥಿಗಳಿಂದ ಹಲವಾರು ಯೋಗಾಸನಗಳ ಪ್ರದರ್ಶನ ಜರುಗಿತು.