ಉಡುಪಿ : ಸಿನಿ ಶೆಟ್ಟಿ ಯವರು ಮಿಸ್ ಇಂಡಿಯಾ 2022 ವಿಜೇತೆ ಹಿನ್ನೆಲೆಯಲ್ಲಿ ಅವರ ಈ ಸಾಧನೆಯನ್ನು ಅಭಿನಂದಿಸುವ ಸಲುವಾಗಿ ಹಾಗೂ ಮುಂದಿನ ಸ್ಪರ್ಧೆ “ಮಿಸ್ ವರ್ಲ್ಡ್ “ಸ್ಪರ್ಧೆಯಲ್ಲಿ ಜಯಗಳಿಸಲೆಂದು ಆ ಪ್ರಯುಕ್ತ ಬೆಳ್ಳಂಪಳ್ಳಿಯಲ್ಲಿರುವ ಭೂತರಾಜ ದೇವಸ್ಥಾನಕ್ಕೆ ಜುಲೈ 19ರ ಮಂಗಳಾರ ಸಂಜೆ 5.30 ಭೇಟಿ ನೀಡಲಿದ್ದಾರೆ.
ಶ್ರೀದೇವರಲ್ಲಿ ಪ್ರಾರ್ಥನೆ ಮತ್ತು ಆಶೀರ್ವಾದ ಪಡೆಯಲು ಭೂತರಾಜದೇವಸ್ಥಾನಕ್ಕೆ ಆಗಮಿಸಲಿದ್ದಾರೆ ಎಂದು ಆಡಳಿತ ಮಂಡಳಿಯ ಮೊಕ್ತೇಸರರಾದ ಶುಭಕರ ಬಳ್ಳಾಲ್, ಸುರೇಶ್ ಬಳ್ಳಾಲ್, ಹಾಗೂ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Advertisement. Scroll to continue reading.