ಉತ್ತರ ಪ್ರದೇಶ: ವೇಗವಾಗಿ ಬಂದ ಟ್ರಕ್ ಕನ್ವರ್ ಯಾತ್ರಿಗಳ ಗುಂಪಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಕನ್ವರ್ ಭಕ್ತರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹತ್ರಾಸ್ ಆಗ್ರಾ ರಸ್ತೆಯ ಬದರ್ ಗ್ರಾಮದ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 93ರ ಹತ್ರಾಸ್ ನ ಸದಾಬಾದ್ ಪಿಎಸ್ ನಲ್ಲಿ ಶನಿವಾರ ತಡರಾತ್ರಿ 2.15ರ ಸುಮಾರಿಗೆ ಈ ಘಟನೆ ನಡೆದಿದ್ದು, ಕನ್ವರ್ ಯಾತ್ರಿಗಳು ಮಧ್ಯಪ್ರದೇಶದ ಗ್ವಾಲಿಯರ್ ಗೆ ಸೇರಿದವರು ಎಂದು ತಿಳಿದುಬಂದಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕನ್ವರ್ ಯಾತ್ರಿಗಳ ಗುಂಪು ಹರಿದ್ವಾರದಿಂದ ಗ್ವಾಲಿಯರ್ ಗೆ ಹಿಂದಿರುಗುತ್ತಿತ್ತು ಎನ್ನಲಾಗಿದೆ.
Advertisement. Scroll to continue reading.