ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಮಂದಾರ್ತಿ ಸಮೀಪದ ತಂತ್ರಾಡಿಯ ಆಶಾ ಆಚಾರ್ಯ ಸ್ನಾಯು ದೌರ್ಬಲ್ಯಕ್ಕೆ ಒಳಗಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದಾರೆ.
ಅರೆಕಾಲಿಕ ಶಿಕ್ಷಕಿಯಾಗಿ, ಬಳಿಕ ಗೃಹರಕ್ಷಕದಳದಲ್ಲಿ ಕೋವಿಡ್ ಸಮಯದಲ್ಲಿ ಬ್ರಹ್ಮಾವರ ಠಾಣಾವ್ಯಾಪ್ತಿಯಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸಿ ಸಾರ್ವಜನಿಕವಾಗಿ ಮೆಚ್ಚುಗೆ ಪಡೆದಿದ್ದ, ಆಶಾಳಿಗೆ ೨ ಚಿಕ್ಕ ಮಕ್ಕಳಿದ್ದು, ಪತಿ ಲಕ್ಷಣ ಆಚಾರ್ಯ ಮರದ ಕೆಲಸ ಮಾಡಿಕೊಂಡು ಮಂದಾರ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಕಳೆದ ೨ ವರ್ಷದಿಂದ ಹಲವಾರು ಕಡೆ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗದೆ ಇದೀಗ ಮಣಿಪಾಲದಲ್ಲಿದ್ದು, ಪೂರ್ತಿ ಗುಣಮುಖರಾಗಲು ೫ ಲಕ್ಷ ರೂ ಹಣದ ಅಗತ್ಯತೆ ಇದ್ದು ತೀರಾ ಬಡವರಾದ ಅವರ ಈಗೀನ ಸ್ಥಿತಿಗೆ ಹಣದ ಅವಶ್ಯಕತೆಗೆ ಸಾರ್ವಜನಿಕರಿಂದ ನೆರವಿನ ಹಸ್ತ ಬಯಸಿದ್ದಾರೆ.
Advertisement. Scroll to continue reading.
ಆರ್ಥಿಕ ನೆರವು ನೀಡುವವರು ಅವರ ಪತಿಯ ಬ್ಯಾಂಕ್ ಖಾತೆಗೆ ಅಥವಾ ಗೂಗಲ್ ಪೇ ಮತ್ತು ಪೋನ್ ಪೇ ಸಂಖ್ಯೆಗೆ ನೀಡುವಂತೆ ವಿನಂತಿಸಿದ್ದಾರೆ.
NAME : LAKSHMANA ACHAR A/C NO : 81940100001083
IFSE, CODE:BARBOVJMAMU- BANK OF BARODA MANDARTHI- BRANCH
GOOGLE PAY AND PHONE PAY NO- 9741824782
Advertisement. Scroll to continue reading.