ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೦೧-೧೦-೨೩, ವಾರ: ಭಾನುವಾರ, ತಿಥಿ : ಬಿದಿಗೆ, ನಕ್ಷತ್ರ: ಅಶ್ವಿನಿ

ವ್ಯಾಪಾರದಲ್ಲಿ ಆರ್ಥಿಕ ಲಾಭ. ಹೊಸ ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಯಶಸ್ಸು. ಖರ್ಚುಗಳ ಕುರಿತು ನಿಯಂತ್ರಿಸುವಿರಿ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಶಿವನ ಆರಾಧಿಸಿ.

ನೀವು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಖರ್ಚು ಬೇಡ. ಚಂಚಲ ಮನಸ್ಸನ್ನು ನಿಯಂತ್ರಿಸಿಕೊಳ್ಳಿ ಅತಿಯಾದ ಆತ್ಮವಿಶ್ವಾಸದಿಂದ ಕೆಲಸ ಹಾಳಾಗಬಹುದು. ಹಣದ ವಿಷಯದಲ್ಲಿ ಕುಟುಂಬದಲ್ಲಿ ಜಗಳವಾಗಬಹುದು. ಶಿವನ ನೆನೆಯಿರಿ.

Advertisement. Scroll to continue reading.

ಇಂದು ನೀವು ತುಂಬಾ ಸಂತೋಷವಾಗಿರುತ್ತೀರಿ. ಕೆಲಸದ ವಿಚಾರದಲ್ಲಿ ಆರ್ಥಿಕ ಲಾಭ. ಸಾಮಾಜಿಕ ಗೌರವ ಪ್ರಾಪ್ತಿ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ನಿಮ್ಮ ವರ್ತನೆ ಕುರಿತು ಮೆಚ್ಚುಗೆ ವ್ಯಕ್ತವಾಗಲಿದೆ. ಹನುಮನ ನೆನೆಯಿರಿ.

ನಿಮ್ಮ ಕೆಲಸದ ಮೇಲೆ ಗಮನಹರಿಸಿ. ನೀವು ಸ್ವಲ್ಪ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಸಂಜೆ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ವ್ಯಾಪಾರದಲ್ಲಿ ಬೆಳವಣಿಗೆಗೆ ಹೂಡಿಕೆ ಮಾಡಬಹುದು. ಹಳೆಯ ಸಂಪರ್ಕಗಳು ಪ್ರಯೋಜನಕಾರಿಯಾಗುತ್ತವೆ. ದುರ್ಗೆಯ ಆರಾಧಿಸಿ.

ಅತಿಥಿಗಳು ಮನೆಗೆ ಬರಬಹುದು. ವ್ಯಾಪಾರಕ್ಕೆ ಸಂಬಂಧಿಸಿದಂತೆ ಹೊಸ ಒಪ್ಪಂದಗಳು ಮಾಡುವಿರಿ. ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ರಾಜಕೀಯಕ್ಕೆ ಸಂಬಂಧಿಸಿದವರು ಉನ್ನತ ಸ್ಥಾನಗಳನ್ನು ಪಡೆಯಬಹುದು. ಶ್ರೀರಾಮನ ನೆನೆಯಿರಿ.

ಕೆಲಸದ ಸ್ಥಳದಲ್ಲಿ ಒತ್ತಡ ಇರುತ್ತದೆ. ಕಾನೂನು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಬಹುದು. ವೈವಾಹಿಕ ಸಂಬಂಧಗಳಲ್ಲಿ ಅಪನಂಬಿಕೆಯ ಪರಿಸ್ಥಿತಿ ಉದ್ಭವಿಸಲು ಬಿಡಬೇಡಿ. ಇಂದು ಹೊಸ ಕೆಲಸವನ್ನು ಪ್ರಾರಂಭಿಸುವುದು ಉತ್ತಮವಲ್ಲ. ವಿಷ್ಣುವನ್ನು ಆರಾಧಿಸಿ.

Advertisement. Scroll to continue reading.

ನಿಮ್ಮ ಯೋಜನೆಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ. ಹಿಂದೆ ಮಾಡಿದ ಕಠಿಣ ಕೆಲಸವು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಪ್ರೇಮ ವಿವಾಹಕ್ಕೆ ಮನೆಯವರ ಒಪ್ಪಿಗೆ ಸಿಗಬಹುದು. ವಿದ್ಯಾರ್ಥಿಗಳು ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ರುದ್ರಾಭಿಷೇಕ ಮಾಡಿಸಿ.

ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡಲಿದ್ದಾರೆ. ಇಂದು ನೀವು ನಿಮ್ಮ ಕೆಲಸಕ್ಕಾಗಿ ಇತರರನ್ನು ಅವಲಂಬಿಸಬೇಕಾಗುತ್ತದೆ. ಆಸ್ತಿ ವಿವಾದಗಳು ಇತ್ಯರ್ಥವಾಗಬಹುದು. ವಿರೋಧಿಗಳಿಂದ ತೊಂದರೆ. ಆರೋಗ್ಯದ ಕಾಳಜಿ ಇರಲಿ. ಶನಿದೇವನ ನೆನೆಯಿರಿ.

ನೀವು ಅನಾವಶ್ಯಕ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು ಪ್ರೇಮ ಸಂಬಂಧಗಳಲ್ಲಿ ಆಪ್ತತೆ ಹೆಚ್ಚಲಿದೆ. ಆಧ್ಯಾತ್ಮಿಕ ಒಲವಿರುವವರಿಗೆ ಆಧ್ಯಾತ್ಮಿಕ ಆಸಕ್ತಿ ಹೆಚ್ಚಲಿದೆ. ವಿಘ್ನೇಶ್ವರನ ಆರಾಧಿಸಿ.

ನೀವು ಹೊಸ ವಾಹನವನ್ನು ಇಂದು ಖರೀದಿಸಬಹುದು. ಸಂಜೆ ಯಾವುದೋ ಕಾರಣಕ್ಕೆ ಮನೆಯಲ್ಲಿ ಜಗಳ ಸಾಧ್ಯತೆ. ಶಾಂತ ಚಿತ್ತರಾಗಿದ್ದಷ್ಟು ಉತ್ತಮ. ಅನಾವಶ್ಯಕ ಯೋಚನೆ ಬೇಡ. ಗುರುವ ನೆನೆಯಿರಿ.

Advertisement. Scroll to continue reading.

ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಆರ್ಥಿಕ ಲಾಭವಿದೆ. ನಿಮ್ಮ ಆಲೋಚನೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಿ. ಮಂಜುನಾಥನ ನೆನೆಯಿರಿ.

ಇಂದು ದಿನದ ಆರಂಭವು ಉತ್ತಮವಾಗಿರುವುದಿಲ್ಲ. ಆಯಾಸ ಹೆಚ್ಚಲಿದೆ. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ತಪ್ಪು ಆಲೋಚನೆಗಳಿಂದಾಗಿ ನೀವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಹೆಚ್ಚುತ್ತಿರುವ ಕೆಲಸದ ಒತ್ತಡದಿಂದ ಚಿಂತೆ ಕಾಡಲಿದೆ. ಶನೈಶ್ಚರನ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com