ಪಡಿಬಿದ್ರಿ : ಮನೆಯಲ್ಲಿ ಯಾರೂ ಇಲ್ಲದ ವೇಳೆ ನಗ, ನಗದು ಕಳವುಗೈದಿರುವ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ. ಹೋಟೆಲ್ನಲ್ಲಿ ವೈಟರ್ ಕೆಲಸ ಮಾಡಿಕೊಂಡಿರುವ ಸದಾನಂದ ಎಂಬವರ ಮನೆಯಲ್ಲಿ ಕೃತ್ಯ ನಡೆದಿದೆ.
ಸದಾನಂದ ಅವರ ಪತ್ನಿ ತನ್ನ ಅಕ್ಕನ ಗಂಡನ ಉತ್ತರ ಕ್ರಿಯೆಗೆಂದು ಶುಕ್ರವಾರ ಶಿರ್ವ ಬಂಟಕಲ್ಲಿಗೆ ತೆರಳಿದ್ದರು. ಸದಾನಂದ ಅವರು ಶನಿವಾರ ಬೆಳಿಗ್ಗೆ 7:30 ಗಂಟೆಗೆ ಲ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದಾರೆ.
ಈ ವೇಳೆ ಮನೆಯಲ್ಲಿ ಯಾರು ಇಲ್ಲದ್ದನ್ನ ಗಮನಿಸಿದ ಕಳ್ಳರು 11/2 ಪವನ್ ಚಿನ್ನದ ಚೈನ್, 1/2 ಪವನ್ ಚಿನ್ನದ ಉಂಗುರ, ಸಣ್ಣ ಕರಿಮಣಿ ಕಾಯಿ ಇರುವ ಕಿವಿಯ ಟಿಕ್ಕಿ ಹಾಗೂ ನಗದು ರೂ. 5000/- ನ್ನು ಕಳವುಗೈದಿದ್ದಾರೆ. ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ. 50,000/- ಆಗಿದೆ.
Advertisement. Scroll to continue reading.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.