ಜ್ಯೋತಿಷ್ಯ

ಇಂದಿನ ಭವಿಷ್ಯ

1

ದಿನಾಂಕ : ೦೩-೧೦-೨೩, ವಾರ : ಬುಧವಾರ, ತಿಥಿ: ಪಂಚಮಿ, ನಕ್ಷತ್ರ: ಕೃತ್ತಿಕ

ನೀವು ಸಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುತ್ತೀರಿ. ಕಮಿಷನ್ ಸಂಬಂಧಿತ ಕೆಲಸಗಳಿಂದ ಲಾಭ. ಬಹಳ ಸಮಯದ ನಂತರ ಇಂದು ನೀವು ಹಳೆಯ ಸ್ನೇಹಿತರೊಂದಿಗೆ ಭೇಟಿಯಾಗುವಿರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ನಿರ್ಲಕ್ಷ್ಯ ತೋರದಿರಿ. ರಾಮನ ನೆನೆಯಿರಿ.

ಹೊಸ ಯೋಜನೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಮ್ಮ ಪಾತ್ರ ಮಹತ್ವದ್ದಾಗಿದೆ. ನಿಮ್ಮ ಸಂಬಳ ಹೆಚ್ಚಾಗುವ ಸಾಧ್ಯತೆ. ಪತಿ-ಪತ್ನಿಯರ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗುವುದು. ನಾಗಾರಾಧನೆ ಮಾಡಿ.

Advertisement. Scroll to continue reading.

ಇಂದು ಕೆಲವು ಕಾರಣಗಳಿಂದ ನಿಮ್ಮ ಮನಸ್ಸು ಗೊಂದಲಕ್ಕೊಳಗಾಗುತ್ತದೆ. ರಹಸ್ಯ ಶತ್ರುಗಳ ಬಗ್ಗೆ ನೀವು ಜಾಗರೂಕರಾಗಿರಬೇಕು. ಮಕ್ಕಳ ಕುರಿತು ಕಾಳಜಿ ಇರಲಿ. ನಿಮ್ಮ ಸಾಮರ್ಥ್ಯವನ್ನು ಬಳಸಿಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ. ಶಿವನ ಆರಾಧಿಸಿ.

ವೈವಾಹಿಕ ಜೀವನದಲ್ಲಿ ತಪ್ಪು ತಿಳಿವಳಿಕೆ ಬೇಡ. ಆಧ್ಯಾತ್ಮಿಕತೆಯತ್ತ ಒಲವು ಹೆಚ್ಚಾಗುತ್ತದೆ. ನೀವು ಭವಿಷ್ಯದ ಯೋಜನೆಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಬಹುದು. ನಿಮ್ಮ ಸಮಸ್ಯೆಗಳಿಗೆ ಜಾಣ್ಮೆಯಿಂದ ಪರಿಹಾರ ಕಂಡುಕೊಳ್ಳುವಿರಿ. ದೇವಿಯ ನೆನೆಯಿರಿ.

ನಿಮ್ಮ ಕೆಲಸದ ಶೈಲಿಯಲ್ಲಿ ನೀವು ಬದಲಾವಣೆಗಳನ್ನು ತರಬಹುದು. ಹೊಸ ಉದ್ಯೋಗ ಸಿಗುವ ಸಾಧ್ಯತೆ ಇದೆ. ನಿಮ್ಮ ಜವಾಬ್ದಾರಿಗಳಿಂದ ದೂರ ಸರಿಯಬೇಡಿ. ಬೆಲಬಾಳುವ ವಸ್ತುವಿನ ಬಗ್ಗೆ ಎಚ್ಚರ ಇರಲಿ. ರಾಮನ ನೆನೆಯಿರಿ.

ಕುಟುಂಬದ ಸದಸ್ಯರೊಂದಿಗೆ ಕಲಹ ಉಂಟಾಗುವ ಸಾಧ್ಯತೆ. ಸಂಗಾತಿಗೆ ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಕುಟುಂಬದ ಹಿರಿಯ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನಿಮ್ಮ ಬಾಸ್ ಜೊತೆಗಿನ ಸಂಬಂಧವನ್ನು ಹಾಳು ಮಾಡಬೇಡಿ. ವಿಷ್ಣುವನ್ನು ನೆನೆಯಿರಿ.

Advertisement. Scroll to continue reading.

ಕೆಲಸದ ಸ್ಥಳದಲ್ಲಿ ಜನರು ನಿಮಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಕುಟುಂಬದಲ್ಲಿ ಯಾವುದೋ ವಿಚಾರಕ್ಕೆ ಜಗಳ ಆಗಬಹುದು. ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇರಿಸಿ. ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳಿರಬಹುದು. ವೈದ್ಯರನ್ನು ಕಾಣಿ. ಮಂಜುನಾಥನ ನೆನೆಯಿರಿ.

ಇಂದು ನೀವು ಖಂಡಿತವಾಗಿಯೂ ಇತರರಿಗೆ ಸಹಾಯ ಮಾಡುವಿರಿ. ನಿಮ್ಮ ಸಂಗಾತಿಯ ಬಗ್ಗೆ ಪ್ರೀತಿಯ ಭಾವನೆ ಹೆಚ್ಚಾಗುತ್ತದೆ. ಸ್ನೇಹಿತರ ಮೂಲಕ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ನೀವು ಹೊಸ ಕಾರ್ಯಗಳನ್ನು ಕಲಿಯಬಹುದು. ಶಿವನ ಆರಾಧಿಸಿ.

ನಿಮ್ಮ ಪ್ರತಿಭೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ದಿನ ಉತ್ತಮವಾಗಿದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚು ಶ್ರಮವಹಿಸಬೇಕು. ವಿದೇಶದಲ್ಲಿ ಕೆಲಸ ಮಾಡಲು ಬಯಸುವವರಿಗೆ ಉದ್ಯೋಗಾವಕಾಶ ಸಿಗಬಹುದು. ಶನೈಶ್ಚರನ ನೆನೆಯಿರಿ.

ವೃತ್ತಿಗೆ ಸಂಬಂಧಿಸಿದಂತೆ ಮನಸ್ಸಿನಲ್ಲಿ ಸಂದಿಗ್ಧತೆ ಇರುತ್ತದೆ. ನೀವು ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸುವಿರಿ. ಹಠಮಾರಿ ಸ್ವಭಾವದಿಂದ ನಷ್ಟ ಸಂಭವಿಸಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಿ. ಗಣಪನ ನೆನೆಯಿರಿ.

Advertisement. Scroll to continue reading.

ವ್ಯವಹಾರದಲ್ಲಿ ನೀವು ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ನಿಮ್ಮ ಸಂಗಾತಿಯೊಂದಿಗೆ ಉದ್ವಿಗ್ನತೆ ಉಂಟಾಗಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಮಾತನ್ನು ನೀವು ನಿಯಂತ್ರಿಸಬೇಕು. ಮದುವೆಗೆ ಆತುರಪಡಬೇಡಿ. ರಾಯರ ಆರಾಧಿಸಿ.

ವ್ಯಾಪಾರದಲ್ಲಿ ಆರ್ಥಿಕ ಲಾಭ. ಸಾಲ ಮರುಪಾವತಿ. ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುವುದರಲ್ಲಿ ನಿರತರಾಗಿರುತ್ತಾರೆ. ಇಂದು ದೂರ ಪ್ರಯಾಣ ಸಾಧ್ಯತೆ. ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ. ಗುರುವ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com