ಹಿರಿಯಡಕ : ಗೆಳೆಯರ ಬಳಗ ಕಾಜಾರಗುತ್ತು ಇವರು ಬಡ ವಿಶಿಷ್ಟ ಚೇತನ ಮಕ್ಕಳ ವೈದ್ಯಕೀಯ ನೆರವಿಗಾಗಿ ಹಾಗೂ ಶಾಲಾಭಿವೃದ್ಧಿ ನಿಧಿಗಾಗಿ ನಡೆಸುವ ಐದನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಜನವರಿ 31ನೇ ಭಾನುವಾರ ನಡೆಯಲಿದೆ. ಬೆಳಿಗ್ಗೆ 9 ರಿಂದ ಕಾಜಾರಗುತ್ತು ಧೂಮಾವತಿ ಮೈದಾನದಲ್ಲಿ ಕಾಜಾರಗುತ್ತು ವ್ಯಾಪ್ತಿಯ ಜನತೆಗೆ ಕ್ರೀಡಾಕೂಟ ನಡೆಯಲಿದೆ. ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಸಹಾಯ ಧನ ವಿತರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಕರಾಟೆ ಕ್ಷೇತ್ರದಲ್ಲಿ ಸಾಧನೆಗೈದ ಸೌಂದರ್ಯ ಆರ್. ನಾಯಕ್, ಕೊರಗಜ್ಜನ ಹಾಡಿನ ಮೂಲಕ ಮನೆ ಮಾತಾಗಿರುವ ಪ್ರತಿಭಾನ್ವಿತ ಮಾಸ್ಟರ್ ಕಾರ್ತಿಕ್ರನ್ನು ಸನ್ಮಾನಿಸಲಾಗುವುದು. ಸರ್ವರಿಗೂ ಆದರದ ಸ್ವಾಗತ.