ಕ್ರೀಡೆ

ಜಾಮೀನಿನ ಮೇಲೆ ಹೊರಬಂದ ಉಗ್ರರಿಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಕೆ; ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯಿಂದ ಹೊಸ ಕ್ರಮ

0

ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರರ ಹಾವಳಿ ನಿಯಂತ್ರಿಸಲು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯು ವಿನೂತನ ಕ್ರಮ ಕೈಗೊಳ್ಳಲು ಯೋಜನೆ ರೂಪಿಸಿದೆ. ಜಾಮೀನಿನ ಮೇಲೆ ಹೊರಬಂದ ಉಗ್ರರ ಚಲನವಲನಗಳ ಮೇಲೆ ನಿಗಾ ಇರಿಸಲು ಅವರಿಗೆ GPS ಟ್ರ್ಯಾಕರ್ ಅಳವಡಿಸಿದ್ದಾರೆ. ಆ ಮೂಲಕ ಈ ವಿನೂತನ ಕ್ರಮ ಕೈಗೊಂಡ ದೇಶದ ಮೊದಲ ಪೊಲೀಸ್ ಇಲಾಖೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ, ಒಳನುಸುಳುವಿಕೆ ಯಾವಾಗಲೂ ಸೇನೆಯನ್ನು, ಜನರನ್ನು ಬಾಧಿಸುತ್ತಿದ್ದು, ಶಂಕಿತ ಉಗ್ರರ ಮೇಲೆ ನಿಗಾ ಇರಿಸಲು, ಆ ಮೂಲಕ ಮುಂದೆ ಎದುರಾಗಬಹುದಾದ ಅಪಾಯವನ್ನು ತಡೆಯಲು ಜಮ್ಮು-ಕಾಶ್ಮೀರ ಪೊಲೀಸರು ಜಿಪಿಎಸ್‌ ಟ್ರ್ಯಾಕರ್‌ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಆ ಮೂಲಕ ದೇಶದಲ್ಲಿಯೇ ಮೊದಲ ಬಾರಿಗೆ ಶಂಕಿತ ಉಗ್ರರ ಮೇಲೆ ನಿಗಾ ಇರಿಸಲು ಜಿಪಿಎಸ್‌ ಟ್ರ್ಯಾಕರ್‌ ಬಳಿಸಿದ ಮೊದಲ ಪೊಲೀಸ್‌ ಇಲಾಖೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಅಳವಡಿಕೆ ಹೇಗೆ ?

Advertisement. Scroll to continue reading.

ಬಂಧಿತರಾಗಿರುವ ಶಂಕಿತ ಉಗ್ರರು ಜಾಮೀನು ಪಡೆದು ಜೈಲಿನಿಂದ ಹೊರಗೆ ಬಿಡುವಾಗ ಅವರ ಪಾದಕ್ಕೆ ಜಿಪಿಎಸ್‌ ಟ್ರ್ಯಾಕರ್‌ ಅಳವಡಿಸಲಾಗುತ್ತದೆ. ಇದರಿಂದ ಶಂಕಿತ ಉಗ್ರರು ಜೈಲಿನ ಹೊರಗೆ ಕೈಗೊಳ್ಳುವ ಚಟುವಟಿಕೆಗಳು, ಚಲನವಲನಗಳ ಮೇಲೆ ನಿಗಾ ಇರಿಸಲು ಸಾಧ್ಯವಾಗುತ್ತದೆ. ಜಾಮೀನಿಗೆ ಅರ್ಜಿ ಸಲ್ಲಿಸಿರುವ ಗುಲಾಂ ಮೊಹಮ್ಮದ್‌ ಭಟ್‌ ಎಂಬ ಶಂಕಿತ ಉಗ್ರನಿಗೆ ಜಿಪಿಎಸ್‌ ಅಳವಡಿಸುವ ಮೂಲಕ ಜಮ್ಮು-ಕಾಶ್ಮೀರ ಪೊಲೀಸರು ತಂತ್ರಜ್ಞಾನದ ಬಳಕೆ ಆರಂಭಿಸಿದ್ದಾರೆ. 

ಗುಲಾಂ ಮೊಹಮ್ಮದ್‌ ಭಟ್‌ ವಿರುದ್ಧ 2.5 ಲಕ್ಷ ರೂ. ಹಣ ಸಾಗಿಸುತ್ತಿದ್ದಾಗ ಬಂಧಿಸಿ ಆತನ ವಿರುದ್ಧ ಟೆರರ್ ಫಂಡಿಂಗ್ ಕೇಸ್ ದಾಖಲಿಸಲಾಗಿತ್ತು. ಈತ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಮತ್ತು ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ್ದಕ್ಕಾಗಿ ಮತ್ತೊಂದು ಪ್ರಕರಣದಲ್ಲಿ ದೆಹಲಿಯ ಎನ್‌ಐಎ ಕೋರ್ಟ್ ಪಟಿಯಾಲಾ ಹೌಸ್ ನಿಂದ ಶಿಕ್ಷೆಗೊಳಗಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ದೇಶಗಳಲ್ಲಿ ಬಳಕೆ :
ಇನ್ನು ಈ ತಂತ್ರಜ್ಞಾನ ಭಾರತ ಮಾತ್ರವಲ್ಲ.. ಜಗತ್ತಿನ ಇತರೆ ದೇಶಗಳಲ್ಲೂ ಇದೆ. ಶಂಕಿತ ಉಗ್ರರು ಸೇರಿ ಯಾವುದೇ ಅಪರಾಧದ ಆರೋಪ ಹೊತ್ತಿರುವವರ ಮೇಲೆ ನಿಗಾ ಇರಿಸಲು ಬೇರೆ ದೇಶಗಳಲ್ಲಿ ಈಗಾಗಲೇ ಜಿಪಿಎಸ್‌ ಟ್ರ್ಯಾಕರ್‌ ತಂತ್ರಜ್ಞಾನದ ಬಳಕೆ ಮಾಡಲಾಗುತ್ತಿದೆ. ಅಮೆರಿಕ, ಬ್ರಿಟನ್‌, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ ಸೇರಿ ಹಲವು ದೇಶಗಳಲ್ಲಿ ಜಾಮೀನು ಪಡೆದು, ಪರೋಲ್‌ ಮೇಲೆ ಜೈಲಿನಿಂದ ಹೊರಬಂದವರ ಮೇಲೆ ಜಿಪಿಎಸ್‌ ಟ್ರ್ಯಾಕರ್‌ ಮೂಲಕವೇ ನಿಗಾ ಇರಿಸಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಸಂಭವಿಸಬಹುದಾದ ದಾಳಿ, ಅಪರಾಧಗಳನ್ನು ನಿಗ್ರಹಿಸಲು ಸಾಧ್ಯವಾಗಿದೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com