ಉಡುಪಿ : ಕರ್ನಾಟಕ ಗಮಕ ಕಲಾ ಪರಿಷತ್ತು, ಉಡುಪಿ ಜಿಲ್ಲೆ, ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ, ತಾಲೂಕು ಘಟಕ ತುಳುಕೂಟ, ಉಡುಪಿ, ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಸಹಯೋಗದಲ್ಲಿ ಮಂದಾರ ರಾಮಾಯಣ ತುಳು/ಕನ್ನಡ ಗಮಕ ವಾಚನ ಕಾರ್ಯಕ್ರಮ ನಡೆಯಲಿದೆ.
ನವೆಂಬರ್ 11 ರಂದು ಶನಿವಾರ ಸಂಜೆ 4 ಗಂಟೆಯಿಂದ 6 ರ ವರೆಗೆ ಅಜ್ಜರಕಾಡು ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಜಿಲ್ಲಾ ಗ್ರಂಥಾಲಯ ಸಭಾಭವನದಲ್ಲಿ ನಡೆಯಲಿದೆ.
ಗಾನಶ್ರೀ ಸುರೇಶ ರಾವ್ ಅತ್ತೂರು, ವಸಂತಿ ಆರ್. ಶೆಣೈ, ಉಡುಪಿ ಇವರು ಗಮಕ ವಾಚನ ಮಾಡಲಿದ್ದಾರೆ. ಡಾ.ನಿಕೇತನ ಪ್ರಸ್ತಾವನೆಗೈಯಲಿದ್ದಾರೆ.
Advertisement. Scroll to continue reading.
ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ತುವಿನ ಅಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು, ಉಡುಪಿ ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ತಾಲೂಕು ಗಮಕ ಕಲಾ ಪರಿಷತ್ತುವಿನ ಅಧ್ಯಕ್ಷ ಎಂ. ಎಲ್. ಸಾಮಗ, ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಮುರಳೀಧರ ಉಪಾಧ್ಯ ಹಿರಿಯಡಕ ಉಪಸ್ಥಿತರಿರಲಿದ್ದಾರೆ.