ಬೆಂಗಳೂರು: ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಗರಡಿ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಉತ್ತಮ ಆರಂಭ ಪಡೆದಿದೆ.
ಈ ಕುಸ್ತಿ ಕ್ರೀಡೆ ಆಧಾರಿತ ಚಿತ್ರದಲ್ಲಿ ನಟ ದರ್ಶನ್ ತೂಗುದೀಪ್, ಕೌರವ ಖ್ಯಾತಿಯ ನಟ ಬಿಸಿ ಪಾಟೀಲ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಪ್ರಮುಖ ವಿಶೇಷವಾಗಿದೆ.
ಯಶಸ್ ಸೂರ್ಯ ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ನಟ ದರ್ಶನ್ ತೂಗುದೀಪ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ದರ್ಶನ್ ಅಭಿಮಾನಿಗಳಿಗೆ ಸಂತಸ ತಂದಿದೆ. ದರ್ಶನ್ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಅದು ಚಿತ್ರದಲ್ಲಿನ ಪ್ರಭಾವಿ ಪಾತ್ರ ಎನ್ನಲಾಗಿದೆ.
Advertisement. Scroll to continue reading.
ದರ್ಶನ್ ಎಂಟ್ರಿ ಸಕತ್ತಾಗೆ ಇದ್ದು, ಮಸ್ತ್ ಡೈಲಾಗ್ ಹೊಡೆಯುತ್ತ, ಭರ್ಜರಿ ಫೈಟ್ ಮಾಡುವ ಸೀನ್ ಅಭಿಮಾನಿಗಳಿಗೆ ಹಬ್ಬವಾಗಿದೆ.
ವಿಶೇಷ ಎಂದರೆ ಡಿಬಾಸ್ ಎಂಟ್ರಿ ಸೀನ್ ಬರುತ್ತಲೇ ಸ್ಕ್ರೀನಿಂಗ್ ಅನ್ನು ಕೆಲಕಾಲ ಪಾಸ್ ಮಾಡಿದ ಅಭಿಮಾನಿಗಳು ದರ್ಶನ್ ಸೀನ್ ಗೆ ಆರತಿ ಮಾಡಿ ಕುಂಬಳಕಾಯಿ ಹೊಡೆದು ತಮ್ಮ ಪ್ರೀತಿ ತೋರಿಸಿದ್ದಾರೆ. ಮಹಿಳಾ ಅಭಿಮಾನಿಗಳು ಕೂಡ ಚಿತ್ರ ಮಂದಿರದ ವೇದಿಕೆ ಮೇಲೆ ಹತ್ತಿ ಕುಣಿದುಕುಪ್ಪಳಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Advertisement. Scroll to continue reading.