ಪಂಜಾಬ್ : ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿಯ ಸಮಯದಲ್ಲಿ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಬಟಿಂಡಾ ಎಸ್ಪಿ ಗುರ್ವಿಂದರ್ ಸಿಂಗ್ ಸಂಘಾ ಅವರನ್ನ ಅಮಾನತುಗೊಳಿಸಲಾಗಿದೆ ಎಂದು ಪಂಜಾಬ್ ಗೃಹ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.
ರಾಜ್ಯ ಗೃಹ ಸಚಿವಾಲಯದ ಪ್ರಕಾರ, ಫಿರೋಜ್ಪುರದಲ್ಲಿ ಕಾರ್ಯಾಚರಣೆ ಎಸ್ಪಿಯಾಗಿ ನೇಮಕಗೊಂಡಿದ್ದ ಸಿಂಗ್ ವಿರುದ್ಧ ಕರ್ತವ್ಯ ಲೋಪದ ಆರೋಪ ಹೊರಿಸಲಾಗಿದೆ.
ಜನವರಿ 5, 2022ರಂದು, ಪ್ರಧಾನಿ ಪಂಜಾಬ್ ಪ್ರವಾಸಕ್ಕೆ ಹೋಗಿದ್ದರು. ಅವರ ಬೆಂಗಾವಲು ಪಡೆ ಬೈರೋಡ್ ಹುಸೇನಿವಾಲಾ ಬಳಿಯ ಮೇಲ್ಸೇತುವೆಯ ಮೂಲಕ ಹಾದು ಹೋಗುತ್ತಿದ್ದಾಗ, ಪ್ರತಿಭಟನಾಕಾರರು ಅವರ ದಾರಿಯನ್ನ ತಡೆದರು. ಪ್ರಧಾನಿಯವರ ಬೆಂಗಾವಲು ವಾಹನವನ್ನ ಓವರ್ ಬ್ರಿಡ್ಜ್ ಮೇಲೆ 15 ನಿಮಿಷಗಳ ಕಾಲ ನಿಲ್ಲಿಸಬೇಕಾಯಿತು, ನಂತರ ರಸ್ತೆಯನ್ನ ತೆರವುಗೊಳಿಸಲಾಯಿತು. ಈ ಘಟನೆಗೆ ಕೇಂದ್ರ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
Advertisement. Scroll to continue reading.
15 ನಿಮಿಷಗಳ ಕಾಲ ಕಾದ ನಂತರ, ವಾಹನವು ಫಿರೋಜ್ಜುರದ ಕಡೆಗೆ ಮುಂದುವರಿಯದೆ ಬಟಿಂಡಾಕ್ಕೆ ಮರಳಬೇಕಾಯಿತು. ಭಿಸಿಯಾನಕ್ಕೆ ಮರಳಿದ ಮೋದಿ, ‘ನಾನು ಸುರಕ್ಷಿತವಾಗಿ ಮರಳಿದ್ದಕ್ಕಾಗಿ ನಿಮ್ಮ ಸಿಎಂಗೆ ಧನ್ಯವಾದಗಳು’ ಎಂದು ಹೇಳಿದರು. ಆ ಸಮಯದಲ್ಲಿ, ಚರಣ್ಣಿತ್ ಸಿಂಗ್ ಚನ್ನಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದರು.
ಈ ಪ್ರಕರಣದಲ್ಲಿ ತನಿಖಾ ಸಮಿತಿ ವರದಿ ಸಲ್ಲಿಸಿದ್ದು, ಆ ಸಮಯದಲ್ಲಿ ಫಿರೋಜಾಬಾದ್ ಎಸ್ಪಿ ಗುರ್ವಿಂದರ್ ಸಿಂಗ್ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ ಎಂದು ಹೇಳಲಾಗಿದೆ. ಈಗ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಗುರ್ವಿಂದರ್ ಸಿಂಗ್ ಅವರನ್ನ ಅಮಾನತುಗೊಳಿಸಲಾಗಿದೆ. ಸುಪ್ರೀಂ ಕೋರ್ಟ್ ರಚಿಸಿದ್ದ ತನಿಖಾ ಸಮಿತಿಯು ಅಂದಿನ ಮುಖ್ಯ ಕಾರ್ಯದರ್ಶಿ ಅನಿರುದ್ಧ್ ತಿವಾರಿ ಮತ್ತು ಡಿಜಿಪಿ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಅವರನ್ನು ದೋಷಿಗಳೆಂದು ಘೋಷಿಸಿತ್ತು.
Advertisement. Scroll to continue reading.