ಭುವನೇಶ್ವರ: ರಕ್ಷಣಾ ಕ್ಷೇತ್ರದ ಮಹತ್ವದ ಯೋಜನೆಗೆ ವಿರಾಮ ನೀಡಿದ ಅಪರೂಪದ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ. ಆಮೆಗಳ ಜೀವದ ಸಲುವಾಗಿ ಭಾರತೀಯ ಸೇನೆಯ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಾದ ಡಿಆರ್ಡಿಒ, ಒಡಿಶಾ ಕರಾವಳಿಯ ವೀಲರ್ ದ್ವೀಪದಲ್ಲಿನ ತನ್ನ ಕ್ಷಿಪಣಿ ಪರೀಕ್ಷೆಗೆ ವಿರಾಮ ನೀಡಲು ಮುಂದಾಗಿದೆ.
ಮುಂದಿನ ವರ್ಷದ ಜನವರಿಯಿಂದ ಮಾರ್ಚ್ವರೆಗಿನ ಅವಧಿಯು ಆಲೀವ್ ರಿಡ್ಲೆ ಸಮುದ್ರ ಆಮೆಗಳ ಸಾಮೂಹಿಕ ಸಂತಾನೋತ್ಪತ್ತಿಯ ಸಮಯವಾಗಿದೆ. ಈ ಅವಧಿಯಲ್ಲಿ ಒಡಿಶಾ ಕರಾವಳಿ ತೀರದಲ್ಲಿ ಲಕ್ಷಾಂತರ ಆಮೆಗಳು ಸಾಮೂಹಿಕವಾಗಿ ಮೊಟ್ಟೆಗಳನ್ನು ಇರಿಸುತ್ತವೆ. ಈ ಅಳಿವಿನಂಚಿನಲ್ಲಿರುವ ಆಮೆ ಸಂತತಿ ಉಳಿವನ್ನು ನೋಡಿಕೊಳ್ಳಲು ಡಿಆರ್ಡಿಒ ತನ್ನ ಕ್ಷಿಪಣಿ ಪರೀಕ್ಷೆಯನ್ನು ಮುಂದೂಡಲಿದೆ.
ಕರಾವಳಿ ಕಾವಲು ಪಡೆ ಗಸ್ತು :
Advertisement. Scroll to continue reading.
ಕ್ಷಿಪಣಿ ಪರೀಕ್ಷೆ, ಯಾಂತ್ರೀಕೃತ ದೋಣಿಗಳ ಬಳಕೆ ಮತ್ತು ಜನರ ಓಡಾಟವು ದ್ವೀಪ ತೀರದಲ್ಲಿನ ಸಮುದ್ರ ಆಮೆಗಳ ಸಾಮೂಹಿಕ ಸಂತತಿ ಅಭಿವೃದ್ಧಿ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಈ ವರ್ಷ ಸುಮಾರು ಐದು ಲಕ್ಷ ಆಲೀವ್ ರಿಡ್ಲೇಸ್ ಆಮೆಗಳು ಮೊಟ್ಟೆ ಇರಿಸಿವೆ.
ಬಲೆ ಎಳೆಯುವವರು ಮತ್ತು ಮೀನುಗಾರಿಕೆ ದೋಣಿಗಳು ಸಮುದ್ರ ತೀರದಲ್ಲಿ ಆಮೆಗಳು ಮೊಟ್ಟೆ ಇರಿಸಿರುವ ಭಾಗದತ್ತ ಸಮೀಪ ಸುಳಿಯದಂತೆ ತಡೆಯಲು ಸೇನೆ ಹಾಗೂ ಕರಾವಳಿ ಕಾವಲು ಪಡೆಗಳು ಗಸ್ತು ಕಾಯಲಿವೆ.
ಅಳಿವಿನಂಚಿನಲ್ಲಿರುವ ಅಪರೂಪದ ಆಲೀವ್ ರಿಡ್ಲೇ ಆಮೆಗಳ ಸಂತಾನೋತ್ಪತ್ತಿ ಸಂದರ್ಭದಲ್ಲಿ ವೀಲರ್ ದ್ವೀಪದಲ್ಲಿ ನಡೆಯುವ ಕ್ಷಿಪಣಿ ಪರೀಕ್ಷೆಯನ್ನು ನಿಲ್ಲಿಸುವ ನಿರ್ಧಾರವನ್ನು ಒಡಿಶಾ ಮುಖ್ಯ ಕಾರ್ಯದರ್ಶಿ ಪಿಕೆ ಜೇನಾ ಅವರ ನೇತೃತ್ವದ ಸಮಿತಿ ಶುಕ್ರವಾರ ಪ್ರಕಟಿಸಿದೆ.
ಕ್ಷಿಪಣಿ ಪರೀಕ್ಷೆಯಿಂದ ತೊಂದರೆ :
Advertisement. Scroll to continue reading.
ಈ ಸಣ್ಣ ಗಾತ್ರದ ಆಮೆಗಳನ್ನು ಆಹಾರ ಮತ್ತು ಅವುಗಳಲ್ಲಿನ ಎಣ್ಣೆಗಾಗಿ ಬೇಟೆಯಾಡುತ್ತಾರೆ. ಮರಳಿನಲ್ಲಿರುವ ಮರಿಯಾಗದ ಮೊಟ್ಟೆಗಳು ಮತ್ತು ಅವುಗಳ ಚಿಪ್ಪನ್ನು ಗೊಬ್ಬರವಾಗಿ ಬಳಸಲಾಗುತ್ತದೆ. ಹೀಗಾಗಿ ಅವುಗಳ ಸಂತತಿ ಕ್ಷೀಣಿಸಿದೆ.
ಆಮೆಗಳ ಸಂತಾನೋತ್ಪತ್ತಿಯು ವೀಲರ್ ದ್ವೀಪದ ಸಮೀಪದಲ್ಲಿ ನಡೆಯುತ್ತವೆ. ಕ್ಷಿಪಣಿ ಪರೀಕ್ಷೆ ವೇಳೆ ಭಾರಿ ಪ್ರಮಾಣದ ಬೆಳಕು ಮತ್ತು ವಿಪರೀತ ಶಬ್ಧ ಹೊಮ್ಮುತ್ತದೆ. ಇದರಿಂದ ಆಮೆಗಳು ಆಘಾತಕ್ಕೆ ಒಳಗಾಗುವ ಅಪಾಯ ಇರುತ್ತದೆ” ಎಂದು ಅರಣ್ಯ (ವನ್ಯಜೀವಿ) ಪ್ರಧಾನ ಮುಖ್ಯ ಸಂರಕ್ಷಕ ಸುಸಾಂತ ನಂದ ಹೇಳಿದ್ದಾರೆ.
ಗಂಜಾಂ ಜಿಲ್ಲೆಯ ರುಷಿಕುಲ್ಯಾ ಪಕ್ಷಿಧಾಮದಲ್ಲಿ ಕೂಡ ಸುಮಾರು 6.6 ಲಕ್ಷ ಸಮುದ್ರ ಆಮೆಗಳು ಮೊಟ್ಟೆಗಳನ್ನು ಇರಿಸಿವೆ. ನವೆಂಬರ್ 1 ರಿಂದ ಮೇ 31ರವರೆಗೂ ಕರಾವಳಿಯ ಈ ಭಾಗದಲ್ಲಿ ಮೀನುಗಾರಿಕೆ ನಡೆಸದಂತೆ ಒಡಿಶಾ ಸರ್ಕಾರ ಈಗಾಗಲೇ ನಿಷೇಧ ವಿಧಿಸಿದೆ.
Advertisement. Scroll to continue reading.