ಗಂಗೊಳ್ಳಿ : ಸ್ವಾಮೀಜಿ ಆಗುತ್ತೇನೆ ಎಂದು ಹೇಳಿದ್ದ ಯುವಕನೋರ್ವ ಮನೆಯಿಂದ ನಾಪತ್ತೆಯಾಗಿರುವ ಘಟನೆ ಆನಗೋಡುವಿನಲ್ಲಿ ನಡೆದಿದೆ.
ಆನಗೋಡು ನಿವಾಸಿ ಬಾಬು ಎಂಬವರ ಮಗ 25 ವರ್ಷದ ಗುರುರಾಜ ನಾಪತ್ತೆಯಾಗಿರುವ ಯುವಕ. ಆತ ಕಳೆದ 1 ತಿಂಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದ. ಈ ಬಗ್ಗೆ ಆತನಲ್ಲಿ ವಿಚಾರಿಸಿದಾಗ ನನಗೆ ಕೆಲಸಕ್ಕೆ ಹೋಗಲು ಇಷ್ಟವಿಲ್ಲ ನಾನು ಸ್ವಾಮೀಜಿ ಆಗುತ್ತೇನೆ ಎಂದು ಹೇಳಿದ್ದ ಎನ್ನಲಾಗಿದೆ.
ಡಿ.7 ರಂದು ತ್ರಾಸಿ ಪೇಟೆಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವನು ವಾಪಾಸ್ಸು ಈ ತನಕ ಮನೆಗೆ ಬಾರದೇ ಕಾಣೆಯಾಗಿದ್ದಾನೆ ಎಂದು ಬಾಬು ಅವರು ದೂರು ನೀಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.