ಬೈಂದೂರು : ಪ್ರಥ್ವಿರಾಜ್ ರವರ ಬೊಳ್ಳಂಬಳ್ಳಿಯಲ್ಲಿರುವ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಾಗರ ತಾಲೂಕಿನ ಕಾರ್ಗಲ್ ನಿವಾಸಿಯಾದ ರೂಪಾ (೨೬) ದಿನಾಂಕ ೨೬-೧೨-೨೦೨೩ ರಂದು ಬೆಳಿಗ್ಗೆ ೦೫:೩೦ ಗಂಟೆಗೆ ಕಾರ್ಕಳದ ನೆಲ್ಲಿಕಾರಿನಲ್ಲಿರುವ ಪ್ರಥ್ವಿರಾಜ್ ಹೆಂಡತಿ ವಿನುತಾ ರವರ ಮನೆಗೆ ಹೋಗುತ್ತೇನೆಂದು ಬ್ಯಾಗಿನಲ್ಲಿ ತನ್ನ ಬಟ್ಟೆಯನ್ನು ತೆಗೆದುಕೊಂಡು ಹೋದವಳು ವಿನುತಾ ರವರ ಮನೆಗೂ ಹೋಗದಿರುವುದು ತಿಳಿದುಬಂದಿದೆ.
ಅಲ್ಲದೇ, ಆಕೆಗೆ ಪೋನ್ ಮಾಡಿದಲ್ಲಿ ಪೋನ್ ಸ್ವಿಚ್ ಆಫ್ ಆಗಿದ್ದು ಆಕೆಯ ಬಗ್ಗೆ ವಿಚಾರಿಸಿದಲ್ಲಿ ಈ ವರೆಗೂ ಪತ್ತೆಯಾಗದೇ ಕಾಣೆಯಾಗಿರುತ್ತಾಳೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.