ಬೈಂದೂರು : ಕಾಲು ಜಾರಿ ಹೊಳೆಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಭುಜಂಗ(೬೩) ಮೃತ ವ್ಯಕ್ತಿ.
ಭುಜಂಗ ಭಾನುವಾರ ಮಧ್ಯಾಹ್ನ ತೆಂಗಿನತೋಟ ನೋಡಿಕೊಂಡು ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ರಾತ್ರಿಯಾದರೂ ಮನೆಗೆ ಬಂದಿರುವುದಿಲ್ಲ. ಹೀಗಾಗಿ ಸೋಮವಾರ ಬೆಳಿಗ್ಗೆ ಹುಡುಕಾಡಿದಾಗ ಶಿರೂರು ಕಿಂಡಿ ಅಣೆಕಟ್ಟಿನ ಮೋಗೇರ ಹೊಳೆಯ ನೀರಿನಲ್ಲಿ ಪತ್ತೆಯಾಗಿದೆ.
Advertisement. Scroll to continue reading.
ಕಿಂಡಿ ಅಣೆಕಟ್ಟಿನ ದಂಡೆಯ ಮೇಲೆ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿರಬಹುದು ಎನ್ನಲಾಗಿದೆ.