Uncategorized

ಉದ್ಯಾವರ: ಏಳನೇ ಶತಮಾನದ ಆಳುಪರ ಕಾಲದ ಶಾಸನ ಪತ್ತೆ

0

ಉಡುಪಿ‌ : ರಸ್ತೆ ಅಗಲೀಕರಣದ ವೇಳೆ ಉಡುಪಿ‌ ಜಿಲ್ಲೆಯ ಉದ್ಯಾವರದ ಕಲ್ಸಂಕ ಎಂಬಲ್ಲಿ ಶಾಸನವೊಂದು ಪತ್ತೆಯಾಗಿದೆ. ನಾರಾಯಣ ಪೂಜಾರಿಯವರ ಜಾಗದಲ್ಲಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಶಾಸನ ಪತ್ತೆಯಾಗಿದ್ದು, ಸರಕಾರಿ ಪದವಿ ಪೂರ್ವ ಕಾಲೇಜು-ಹೆಜಮಾಡಿಯ ದೈಹಿಕ ಶಿಕ್ಷಕರಾದ ಅಲ್ವಿನ್ ಅಂದ್ರಾದೆ ಶಾಸನವನ್ನು ಪತ್ತೆ ಮಾಡಿದ್ದಾರೆ.
ಈ ಶಾಸನವನ್ನು ಪರಿಶೀಲಿಸಿದ ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ , ಇದು ೭ನೇ ಶತಮಾನದ ಆಳುಪರ ಶಾಸನವಾಗಿದ್ದು,
ಅಗ್ನಿ ಶಿಲೆ (Volcanic Rock) ಯಿಂದ ಕೊರೆಯಲ್ಪಟ್ಟ ‌ಈ ಶಾಸನವು 3 ಅಡಿ ಎತ್ತರವನ್ನು ‌ಹೊಂದಿದ್ದು,‌ ಶಿಲೆಯ ಎರಡು ಭಾಗದಲ್ಲಿ‌ ಶಾಸನವನ್ನು ಬರೆಯಲಾಗಿದೆ‌. ಶಾಸನದ ಒಂದು ಮಗ್ಗುಲಲ್ಲಿ 5 ಸಾಲುಗಳಿದ್ದು, ಇನ್ನೊಂದು‌ ಮಗ್ಗುಲಲ್ಲಿ 6 ಸಾಲುಗಳಿವೆ‌. ೭ನೇ ಶತಮಾನದ ಕನ್ನಡ ಲಿಪಿ ಮತ್ತು ಕನ್ನಡ ಭಾಷೆಯಲ್ಲಿರುವ ಶಾಸನದ ಹೆಚ್ಚಿನ ಅಕ್ಷರಗಳು‌ ತೃಟಿತಗೊಂಡಿದ್ದು, ಕೊನೆಯಲ್ಲಿ ನಿರಿದ ಕಲ್ಲು ಎಂಬ ಉಲ್ಲೇಖವಿದೆ. ಹಾಗಾಗಿ ಈ‌ ಶಾಸನವನ್ನು ಯಾವುದೋ ಘಟನೆಯ‌ ನೆನಪಿಗಾಗಿ‌ ಹಾಕಿರಬಹುದೆಂದು ಮತ್ತು
ಈ ಶಾಸನದ ಹೆಚ್ಚಿನ ಅಧ್ಯಯನವನ್ನು ಮಾಡುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಗಣೇಶ್‌ ರಾಜ್ ಸರಳಬೆಟ್ಟು‌ ಹಾಗೂ ಮಂಜುನಾಥ ಆಚಾರ್ಯ ಪಳ್ಳಿ ಮತ್ತು ಸ್ಥಳೀಯರು ಶಾಸನದ ಶೋಧನೆಗೆ ಸಹಕಾರ ನೀಡಿದರು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com