ಹಿರಿಯಡ್ಕ : ಕೆಲಸ ಸಿಕ್ಕಿಲ್ಲವೆಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಣಜಾರು ಗ್ರಾಮದಲ್ಲಿ ನಡೆದಿದೆ.
ಕಿಶೋರ್ (43) ಆತ್ಮಹತ್ಯೆ ಮಾಡಿಕೊಂಡವರು.
Advertisement. Scroll to continue reading.
ಕಿಶೋರ್ಗೆ ಮೊದಲಿನಿಂದಲೂ ಸರಿಯಾದ ಕೆಲಸ ಇಲ್ಲದೇ ಇದ್ದು, ಜ.14 ರಂದು ಬೆಳಿಗ್ಗೆ ಕೆಲಸ ಕೇಳಿ ಬರುವುದಾಗಿ ಹೇಳಿ ಹೋಗಿದ್ದವರು ಮಧ್ಯಾಹ್ನ ಮನೆಗೆ ಬಂದು ನನಗೆ ಎಲ್ಲಿಯೂ ಕೆಲಸ ಸಿಕ್ಕಿರುವುದಿಲ್ಲ ನಾನು ಸಾಯುವುದು ಒಳ್ಳೆಯದು ಎಂದು ಹೆಂಡತಿ ಹರಿಣಿಯವರಲ್ಲಿ ಹೇಳಿದ್ದಾರೆ. ಈ ವೇಳೆ ಅವರು ಸಮಾಧಾನ ಮಾಡಿ ಬಳಿಕ ಹಾಲ್ ನಲ್ಲಿ ಮಲಗಿದ್ದು, ಹರಿಣಿ ಯವರಿಗೆ ನಿದ್ದೆ ಬಂದ ವೇಳೆಯಲ್ಲಿ ಕಿಶೋರ್ ಅವರು ತನಗೆ ಕೆಲಸ ಸಿಗಲಿಲ್ಲ ಎಂಬ ವಿಷಯದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮಧ್ಯಾಹ್ನ 2:30 ಗಂಟೆಯಿಂದ 3:00 ಗಂಟೆಯ ಮಧ್ಯಾವಧಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ : ನೇಣುಬಿಗಿದು ವೃದ್ಧೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರಂಗ ಗ್ರಾಮದ ಮುನಿಯಾಲು ನೀರಪಲ್ಕೆಯಲ್ಲಿ ನಡೆದಿದೆ.
Advertisement. Scroll to continue reading.
ಪುಟ್ಟು (63) ಆತ್ಮಹತ್ಯೆ ಮಾಡಿಕೊಂಡವರು. ಅವರು ಪ್ರಾಯಸ್ಥರಾಗಿದ್ದು ಯಾವುದೋ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ಸುಮಾರು ಒಂದು ತಿಂಗಳಿನಿಂದ ದಿನಾಂಕ 14/01/2024 ರಂದು ಸಂಜೆ 5:00 ಗಂಟೆ ಮದ್ಯಾವಧಿಯಲ್ಲಿ ಮನೆಯ ಹತ್ತಿರದ ಸರಕಾರಿ ಹಾಡಿಯಲ್ಲಿರುವ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹವು ಸಂಪೂರ್ಣ ಕೊಳೆತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.