ಕರಾವಳಿ

ಉಡುಪಿ ಬೀಚ್ ಫೋಟೋ ಶೇರ್ ಮಾಡಿದ ಬಿಲಿಯನೇರ್‌ ನಿಖಿಲ್ ಕಾಮತ್

1

ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ಸಮರ ಹೆಚ್ಚಾಗುತ್ತಿದೆ. ಬಾಲಿವುಡ್ ಸೆಲೆಬ್ರಿಟಿಗಳು ಬೈಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೆ ಬೆಂಬಲ ನೀಡುತ್ತಿದ್ದಾರೆ. ಲಕ್ಷದ್ವೀಪ ಟೂರ್‌ಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ನಡುವೆ ಭಾರತೀಯ ತಾಣಗಳತ್ತ ಒಲವೂ ಹೆಚ್ಚಾಗುತ್ತಿದೆ..

ಇವೆಲ್ಲದರ ಮಧ್ಯೆ ExploreIndia ಅನ್ನೋ ಕಾನ್ಸೆಪ್ಟ್ ಸಾಕಷ್ಟು ವೈರಲ್ ಆಗುತ್ತಿದೆ.

ಹಲವು ಸೆಲೆಬ್ರಿಟಿಗಳು, ಉದ್ಯಮಿಗಳು ಭಾರತದಲ್ಲಿರುವ ಸುಂದರವಾದ ಪ್ರವಾಸಿ ತಾಣಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

Advertisement. Scroll to continue reading.

ಇತ್ತೀಚಿಗೆ Zerodhaನ ಸಹ ಸಂಸ್ಥಾಪಕರಾದ ನಿಖಿಲ್ ಕಾಮತ್, ತಮ್ಮ ತವರೂರು ಜಿಲ್ಲೆ ಉಡುಪಿ ಬೀಚ್‌ನ ಸುಂದರ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ನಿಖಿಲ್‌ ಕಾಮತ್ ತಮ್ಮ ಎಕ್ಸ್‌ ಖಾತೆಯಲ್ಲಿ, ‘ಭಾರತವು ಕೆಲವು ಅದ್ಭುತವಾದ ಗುಪ್ತ ಕಡಲತೀರಗಳನ್ನು ಹೊಂದಿದೆ. ಅದರಲ್ಲೊಂದು ಉಡುಪಿ ಬೀಚ್. ಇದು ಉಡುಪಿಯ ನನ್ನ ಊರಿನ ಸಮೀಪದಲ್ಲಿದೆ. ವಿದೇಶದ ಕಡಲತೀರಗಳಂತೆ, ಯಾವುದೇ ಜನಸಂದಣಿ, ಅವ್ಯವಸ್ಥೆ ಇಲ್ಲ, ಬಾಲಿ ಮತ್ತು ಥೈಲ್ಯಾಂಡ್‌ನಂತಹ ಕಸದಿಂದ ತುಂಬಿದ ಬೀಚ್‌ಗಳಿಲ್ಲ. ಇಲ್ಲಿನ ರುಚಿಕರವಾದ ಆಹಾರವು ಮನಸ್ಸಿಗೆ ಮುದ ನೀಡುತ್ತದೆ. ಅಲ್ಲದೆ ಯಾವುದೇ ದುಬಾರಿ ಸೀಪ್ಲೇನ್‌ಗಳು, ದೋಣಿ ಸವಾರಿಗಳು, ವಲಸೆ, ವೀಸಾಗಳು ಅಥವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸಾಲುಗಳಲ್ಲಿ ಕಾಯುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಸದ್ಯ ಈ ಟ್ವೀಟ್ ವೈರಲ್ ಆಗಿದೆ. ನೆಟ್ಟಿಗರು ಉತ್ರಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com