ಅರೆ ಹೌದಾ!

WATCH :ಪ್ರಾಣ ಪ್ರತಿಷ್ಠೆ ಕುರಿತು ಟೀಕಿಸುತ್ತಿದ್ದಂತೆ ಕುಸಿದು ಬಿದ್ದ ವೇದಿಕೆ; ವೀಡಿಯೋ ವೈರಲ್

0
FacebookTwitterEmailWhatsAppShare

ಗಯಾ:  ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಿದ್ದ ಮುಖಂಡರೊಬ್ಬರು ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಕುರಿತು ಟೀಕಿಸಲು ಪ್ರಾರಂಭಿಸುತ್ತಿದ್ದಂತೆಯೇ ಹಠಾತ್ ವೇದಿಕೆ ಕುಸಿದುಬಿದ್ದ ಘಟನೆ ನಡೆದಿದೆ. ವಿಡಿಯೋ ವೈರಲ್ ಆಗುತ್ತಿದೆ. ಬಿಹಾರದ ದಿಹುರಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಕ್ವಾಮ್ ಅನ್ಸಾರಿ ಅವರ 51 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನಾಯಕರು ಜಮಾಯಿಸಿದ ಪಸ್ಮಾಂಡ ವಂಚಿತ್ ಮಹಾಸಂಗಟನ್ ಸಂದರ್ಭದಲ್ಲಿ ಈ ಅವಘಡ ನಡೆದಿದೆ.

ಕಾರ್ಯಕ್ರಮಕ್ಕೆ ಆಯೋಜಕರು ಸಾಕಷ್ಟು ವೇದಿಕೆ ನಿರ್ಮಿಸಿದ್ದು, ವೇದಿಕೆ ಕುಸಿದಾಗ ಆರ್‌ಜೆಡಿ ಮಾಜಿ ಸಂಸದ ಅಲಿ ಅನ್ವರ್ ಅನ್ಸಾರಿ ಕೂಡ ವೇದಿಕೆಯಲ್ಲಿದ್ದರು.

Advertisement. Scroll to continue reading.

ಸ್ಥಳೀಯರೊಬ್ಬರು ಮಾತನಾಡುತ್ತಿದ್ದ ವೇಳೆ, ಜನವರಿ 22 ರಂದು ಶ್ರೀ ರಾಮಚಂದ್ರ ಜೀ ಅವರ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಮತ ಸೆಳೆಯಲು ಆಯೋಜಿಸಲಾಗಿದೆ. ಶ್ರೀರಾಮಚಂದ್ರ ಜೀ ಹುಟ್ಟಿದ ದಿನವನ್ನು ಏಕೆ ಆಚರಿಸುವುದಿಲ್ಲ ಎಂದು ಹೇಳಿದ್ದಾರೆ. ಆ ಕೂಡಲೇ ವೇದಿಕೆ ಕುಸಿದುಬಿದ್ದಿದೆ. ಈ ವೀಡಿಯೋ ವೈರಲ್ ಆಗುತ್ತಿದೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com