ಕಾರ್ಕಳ : ಕಸಬಾ ಗ್ರಾಮದ ಶ್ರೀ ದತ್ತಾತ್ರೇಯ ಮೂಕಾಂಬಿಕಾ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಕನ್ನಡದ ಮೂಲದ ಸುಮಾರು 22 ವರ್ಷ ಪ್ರಾಯದ ಶ್ರೀವೆಂಕಟೇಶ ದಾಸರ ಎಂಬವರು ಸುಮಾರು 6 ತಿಂಗಳಿನಿಂದ ದೇವಸ್ಥಾನದಲ್ಲಿ ಸ್ವಚ್ಚತಾ ಕೆಲಸ ಮಾಡಿಕೊಂಡಿದ್ದರು.
ದಿನಾಂಕ : 19.01.2024 ರಂದು ರಾತ್ರಿ ದೇವಸ್ಥಾನದ ಕೋಣೆಯಲ್ಲಿ ಮಲಗಿದ್ದು ದಿನಾಂಕ 20.01.2024 ರಂದು ಬೆಳಿಗ್ಗೆ 5 ಗಂಟೆಗೆ ನೋಡುವಾಗ ಅವರು ಮಲಗಿದ ಕೋಣೆಯಲ್ಲಿ ಇರಲಿಲ್ಲ.
ಅವರ ಬಟ್ಟೆಗಳನ್ನು ತೆಗೆದುಕೊಂಡು ಯಾರಲ್ಲಿಯೂ ಹೇಳದೇ ಅವರ ಸ್ವಂತ ಊರಿಗೆ ಸಹ ಹೋಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2024 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
Advertisement. Scroll to continue reading.