ಕಾರ್ಕಳ : ವಿದ್ಯುತ್ ಆಘಾತದಿಂದ ಕಿರಿಯ ಪವರ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಕಾರ್ಕಳದಲ್ಲಿ ಜ.೨೮ ರಂದು ಸಂಜೆ ೭ ಗಂಟೆಗೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ನೀಲಾನಗರ ಗ್ರಾಮದ ಶ್ರೀನಿವಾಸ(೨೮) ಮೃತ ಯುವಕ. ಇವರು ಒಂದುವರೆ ವರ್ಷದಿಂದ ಮೆಸ್ಕಾಂ ಇಲಾಖೆಯಲ್ಲಿ ಕಿರಿಯ ಪವರ್ ಮ್ಯಾನ್ ಆಗಿ ಕಾರ್ಕಳ ತಾಲೂಕು ಹೊಸ್ಮಾರ್ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದರು.
ನೂರಾಲ್ ಬೆಟ್ಟು ಎಂಬಲ್ಲಿ ವಿದ್ಯುತ್ ಪರಿವರ್ತಕದ ಬಳಿ ವಿದ್ಯುತ್ ಸಂಪರ್ಕ ಮರುಜೋಡಣೆ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸಂಪರ್ಕ ಕೆಲಸ ಮಾಡಿಕೊಂಡಿರುವಾಗ ವಿದ್ಯುತ್ ಶಾಕ್ ಹೊಡೆದು ಗಂಭೀರವಾಗಿ ಗಾಯಗೊಂಡು ಶ್ರೀನಿವಾಸ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
Advertisement. Scroll to continue reading.
ಮೆಸ್ಕಾಂ ಇಲಾಖೆಯ ಮೇಲಾಧಿಕಾರಿಯವರು ತೀರಾ ನಿರ್ಲಕ್ಷತನದಿಂದ ತರಬೇತಿ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಶ್ರೀನಿವಾಸ ಒಬ್ಬರನ್ನೇ ಕಳುಹಿಸಿಕೊಟ್ಟಿದ್ದು ಈ ದುರಂತಕ್ಕೆ ಕಾರಣ ಎಂದು ಮೃತ ಶ್ರೀನಿವಾಸ ಅವರ ಸಹೋದರ ಪರಶುರಾಮ ನೀಡಿರುವ ದೂರಿನ ಅನ್ವಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.