ಚೆನ್ಬೈ: ಸದ್ಗುರು ಮಾ.20ರಂದು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದರು ಮತ್ತು ಅವರು ಇದರಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಇಶಾ ಫೌಂಡೇಶನ್ ಹೇಳಿದೆ. ಮಾ.15ರಂದು ಅವರು ಎಂಆರ್ಐ ಸ್ಕ್ಯಾನಿಂಗ್ಗೆ ಒಳಗಾಗಿದ್ದರು ಮತ್ತು ಅವರ ಮೆದುಳು ಅತಿಯಾಗಿ ರಕ್ತಸ್ರಾವಕ್ಕೆ ಒಳಗಾಗಿತ್ತು ಎಂದು ಇಶಾ ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.
ಆಧ್ಯಾತ್ಮ ಗುರು ಸದ್ಗುರು ಜಗ್ಗಿ ವಾಸುದೇವ್ ಅವರು ಮಾರಣಾಂತಿಕವಾಗಬಲ್ಲ ಮೆದುಳಿನ ಸಮಸ್ಯೆಗೆ ಒಳಗಾಗಿದ್ದರು ಮತ್ತು ಬುಧವಾರ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ಇಶಾ ಫೌಂಡೇಶನ್ ತಿಳಿಸಿದೆ. 66 ವರ್ಷದ ಸದ್ಗುರು ಅವರು ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.
ಮಾ.15ರಂದು ಸದ್ಗುರು ಅವರು ಎಂಆರ್ಐ ಸ್ಕ್ಯಾನಿಂಗ್ಗೆ ಒಳಗಾಗಿದ್ದರು ಮತ್ತು ಇದರಲ್ಲಿ ಮೆದುಳಿನ ತೀವ್ರ ರಕ್ತಸ್ರಾವ ಕಂಡುಬಂದಿತ್ತು. ಆದರೆ ಅವರು ತಾನು ಒಪ್ಪಿಕೊಂಡಿದ್ದ ಕಾರ್ಯಕ್ರಮಗಳನ್ನು ರದ್ದು ಮಾಡಲು ನಿರಾಕರಿಸಿದರು. ನೋವು ನಿವಾರಕ ಔಷಧಿ ಮತ್ತು ಮಾತ್ರೆಗಳನ್ನು ತೆಗೆದುಕೊಂಡು ಅವರು ಇಂಡಿಯಾ ಟುಡೇ ಕಾನ್ಕ್ಲೇವ್ ನಲ್ಲಿ ಭಾಗವಹಿಸಿದರು ಎಂದು ಇಶಾ ಫೌಂಡೇಶನ್ ಪ್ರಕಟಣೆ ತಿಳಿಸಿದೆ.
Advertisement. Scroll to continue reading.
ತಲೆನೋವಿನ ಕಾರಣದಿಂದಾಗಿ ಸದ್ಗುರು ಅವರನ್ನು ಆಸ್ಪತ್ರೆಗೆ ದಾಖಲಿಸಿದ ವೇಳೆ ಅವರ ಮೆದುಳಿನಲ್ಲಿ ಹಲವು ಕಡೆ ರಕ್ತಸ್ರಾವವಾಗುತ್ತಿರುವುದು ಕಂಡುಬಂದಿದೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ ವೇಳೆ ಮಾ.17ರಂದು ದೆಹಲಿಯ ಇಂದ್ರಪ್ರಸ್ಥದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದರು.
ಕಳೆದ ನಾಲ್ಕು ವಾರದಿಂದ ಸದ್ಗುರು ಅವರಿಗೆ ತೀವ್ರ ತಲೆನೋವು ಕಾಡುತ್ತಿತ್ತು. ಮಾ.14ರಂದು ದೆಹಲಿಗೆ ಬಂದ ವೇಳೆ ಇದು ನೋವು ಇನ್ನು ಹೆಚ್ಚಾಗಿತ್ತು. ಅದೇ ದಿನ ೪.೩೦ಕ್ಕೆ ಅವರು ಎಂಆರ್ಐ ಸ್ಕ್ಯಾನಿಂಗ್ ಗೆ ಕೂಡ ಒಳಗಾದರು. ಈ ವೇಳೆ ಮೆದುಳಿನಲ್ಲಿ ರಕ್ತಸ್ರಾವವು ಕಂಡುಬಂದಿದೆ. ಕಳೆದ 3-4 ವಾರದಿಂದ ರಕ್ತಸ್ರಾವವಾಗುತ್ತಿದೆ ಮತ್ತು24-48 ಗಂಟೆಗಳಲ್ಲಿ ಮತ್ತೆ ರಕ್ತಸ್ರಾವವು ಆಗಿದೆ ಎಂದು ಪರೀಕ್ಷೆಯಿಂದ ತಿಳಿದುಬಂದಿತ್ತು ಎಂದು ಇಶಾ ಫೌಂಡೇಶನ್ ಪ್ರಕಟಣೆಯಲ್ಲಿ ಹೇಳಿದೆ.
ಈ ಪರಿಸ್ಥಿತಿಯಲ್ಲೂ ಸದ್ಗುರು ಅವರು ಕಾರ್ಯಕ್ರಮದಲ್ಲಿ ಭಾಗಿಯಾದರು. ಮಾ.೧೭ರಂದು ಅವರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ನರಗಳ ಮೇಲೆ ಕೂಡ ಪರಿಣಾಮವಾಗಿ ಎಡದ ಕಾಲು ದುರ್ಬಲವಾಗಿ ತಲೆನೋವಿನ ಜತೆಗೆ ವಾಂತಿಯು ಆಯಿತು. ಈ ವೇಳೆ ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ಶಸ್ತ್ರಚಿಕಿತ್ಸೆಯ ವೈದ್ಯಕೀಯ ತಂಡದ ನೇತೃತ್ವ ವಹಿಸಿದ್ದ ಡಾ. ವಿನಿತ್ ಸೂರಿ ಅವರು, ಸದ್ಗುರು ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಮೆದುಳು, ದೇಹ ಮತ್ತು ಪ್ರಮುಖ ನಿಯತಾಂಕಗಳು ಸಾಮಾನ್ಯವಾಗುತ್ತಿದೆ ಎಂದು ಹೇಳಿದ್ದಾರೆ.
Advertisement. Scroll to continue reading.