ಹುಬ್ಬಳ್ಳಿ: ನನ್ನ ಮಗಳು ನೇಹಾ ಕೊಲೆಯು ಪೂರ್ವ ನಿಯೋಜಿತ ಎನ್ನಿಸುತ್ತಿದೆ. ಫಯಾಜ್ ಕುಟುಂಬದ ಕುಮ್ಮಕ್ಕು ಇದೆ. ಹೀಗಾಗಿ, ಕುಟುಂಬದ ವಿರುದ್ಧ ಪೊಲೀಸ್ ದೂರು ನೀಡುತ್ತೇನೆ ಎಂದು ಮೃತ ನೇಹಾಳ ತಂದೆ ನಿರಂಜನಯ್ಯ ಹಿರೇಮಠ ಅವರು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ” ನನ್ನ ಮಗಳನ್ನು ಕೊಲೆ ಮಾಡಿರುವ ಫಯಾಜ್ನ ತಂದೆ-ತಾಯಿ ಮತ್ತು ಸಹೋದರಿ ನೀಡುತ್ತಿರುವ ಹೇಳಿಕೆ ನೋಡಿದರೆ ಅವರ ಕುಟುಂಬದಿಂದ ಫಯಾಜ್ ಕುಮ್ಮಕ್ಕು ಇದೆ. ಫಯಾಜ್ ಮತ್ತು ಕುಟುಂಬದವರ ಒಳಸಂಚು ಎನಿಸುತ್ತಿದೆ ” ಎಂದು ಆರೋಪಿಸಿದರು.
ನಾವೀಗ ಮಗಳ ಸಾವಿನ ದುಃಖದಲ್ಲಿ ನಾವು ಇದ್ದೇವೆ. ಆದರೆ, ನಮ್ಮ ಕುಟುಂಬದ ಗೌರವ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ, ಆರೋಪಿ ಫಯಾಜ್ ತಂದೆ-ತಾಯಿ ಮತ್ತು ಸಹೋದರಿ ವಿರುದ್ಧ ದೂರು ನೀಡುವೆ ಎಂದು ಹೇಳಿದರು.
Advertisement. Scroll to continue reading.
ನನ್ನ ಮಗಳ ಮತ್ತು ಆ ಹುಡುಗನ ಕುರಿತು ಪೋಟೋ, ವೀಡಿಯೋ ವೈರಲ್ ಆಗುತ್ತಿವೆ. ನನ್ನ ಮಗಳು ಸತ್ತ ಮೇಲೆ ಯಾರು ಪೋಟೋ ವೈರಲ್ ಮಾಡುತ್ತಿದ್ದಾರೆ? ಹುಬ್ಬಳ್ಳಿಯಲ್ಲಿ ಫಯಾಜ್ಗೆ ಆಶ್ರಯ ಕೊಟ್ಟವರು ಯಾರು? ಈ ರೀತಿ ವೈರಲ್ ಮಾಡುತ್ತಿರುವವರ ವಿರುದ್ಧ ಸಹ ಸೈಬರ್ ಕ್ರೈಮ್ಗೆ ದೂರು ನೀಡುವೆ ಎಲ್ಲಾ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಮಗಳ ಕೊಲೆಯಾದ ದಿನವೇ ಪೊಲೀಸರಿಗೆ ನಾಲ್ಕು ಮಂದಿಯ ಮೇಲೆ ಅನುಮಾನವಿದೆ ಎಂದು ಮಾಹಿತಿ ನೀಡಿದ್ದೆ. ಆದರೆ, ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿಲ್ಲ ಎಂದು ನಿರಂಜನಯ್ಯ ಆರೋಪ ಮಾಡಿದ್ದಾರೆ.
Advertisement. Scroll to continue reading.