ಬೆಂಗಳೂರು: ಯುವ ನಟ ಚೇತನ್ ಚಂದ್ರ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆದಿದೆ. ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ ಚೇತನ್ ಚಂದ್ರ ಮೇಲೆ ಅಟ್ಯಾಕ್ ಮಾಡಲಾಗಿದೆ.
ಸುಮಾರು 20 ಮಂದಿ ಅಟ್ಯಾಕ್ ಮಾಡಿದ್ದಾರೆ ಎಂದು ವರದಿಯಾಗಿದೆ. ಮದರ್ಸ್ ಡೇ ಪ್ರಯುಕ್ತ ತಮ್ಮ ತಾಯಿಯನ್ನು ಚೇತನ್ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರು. ವಾಪಸ್ ಬರುವಾಗ ಚೇತನ್ ಮೇಲೆ 20 ಮಂದಿ ಹಲ್ಲೆ ಮಾಡಿದ್ದಾರೆ ಎಂದು ನಟ ಆರೋಪಿಸಿದ್ದಾರೆ.
ಇನ್ಸ್ಟಾ ಲೈವ್ ಬಂದ ನಟ:
Advertisement. Scroll to continue reading.
ಕಾರ್ನಲ್ಲಿದ್ದ ನಟ ಚೇತನ್ ಚಂದ್ರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ನಟನೇ ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಗಲಾಟೆ ವೇಳೆ ಚೇತನ್ ಮುಖ, ಕಾಲಿಗೆ ಪೆಟ್ಟಾಗಿದೆ. ಗಲಾಟೆ ಬಳಿಕ ಕಗ್ಗಲಿಪುರ ಪೊಲೀಸ್ ಠಾಣೆಗೆ ಅವರು ಹೋಗಿದ್ದಾರೆ. ಪೊಲೀಸರು ಮೊದಲಿಗೆ ಪಕ್ಕದಲ್ಲಿ ಇರುವ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಬರುವಂತೆ ಸೂಚಿಸಿದ್ದಾರೆ.
ಮುಖದಲ್ಲಿ ರಕ್ತ ಸೋರುತ್ತಿದ್ದಾಗಲೇ ಆಸ್ಪತ್ರೆಯಿಂದ ನಟ ಚೇತನ್ ಚಂದ್ರ ಇನ್ಸ್ಟಾ ಲೈವ್ ಬಂದು ಮಾತನಾಡಿದ್ದಾರೆ. ತಮಗೆ ಪೆಟ್ಟಾಗಿರುವುದನ್ನು ವೀಡಿಯೋದಲ್ಲಿ ತೋರಿಸಿದ್ದಾರೆ. ಇವತ್ತು ಮದರ್ಸ್ ಡೇ, ಈ ವಿಡಿಯೋ ನಮ್ಮ ಅಪ್ಪ-ಅಮ್ಮ ನೋಡುತ್ತಿರುತ್ತಾರೆ ಯಾರು ಭಯ ಪಡಬೇಡಿ. ನನ್ನ ಹೆಂಡ್ತಿ, ಪಾಪು ಕೂಡ ನೋಡುತ್ತಿರುತ್ತಾರೆ ಭಯಪಡಬೇಡಿ. ಐಯಾಮ್ ಫೈನ್ ಎಂದು ಚೇತನ್ ಹೇಳಿದ್ದಾರೆ.
Advertisement. Scroll to continue reading.
‘ಪ್ರೇಮಿಸಂ’, ‘ರಾಜಧಾನಿ’, ‘ಪ್ಲಸ್’, ‘ಜಾತ್ರೆ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಚೇತನ್ ಚಂದ್ರ ನಟಿಸಿದ್ದಾರೆ.