ಮಂಗಳೂರು : ಕಾರೊಂದು ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕ ಇದ್ದ ಹಳ್ಳಕ್ಕೆ ಬಿದ್ದ ಪರಿಣಾಮ ಫೋಟೋಗ್ರಾಫರ್ ಮೃತಪಟ್ಟ ಘಟನೆ ಬುಧವಾರ( ಮೇ. 28) ಮುಂಜಾನೆ ನಡೆದಿದೆ.
ಕಾರು ಚಾಲಕ, ಫೋಟೋಗ್ರಾಫರ್ ಸೂರ್ಯ ನಾರಾಯಣ (48 )ಮೃತಪಟ್ಟವರು.
ಕಾರ್ಯಕ್ರಮವೊಂದರ ಫೋಟೋಗ್ರಾಫಿಗೆಂದು ಅವರು ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಕೋಡಿಕಲ್ ಕ್ರಾಸ್ ಬಳಿ ಕಾರಿನ ನಿಯಂತ್ರಣ ತಪ್ಪಿ ಸಮೀಪದ ಹಳ್ಳಕ್ಕೆ ಬಿದ್ದು ದುರಂತ ಸಂಭವಿಸಿದೆ.
Advertisement. Scroll to continue reading.
ಸೂರ್ಯನಾರಾಯಣ ಕಳೆದ ಹಲವು ವರ್ಷಗಳಿಂದ ಉಡುಪಿಯ ಕಿದಿಯೂರು ವರ್ಣ ಲ್ಯಾಬ್ ನಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚಿಗಷ್ಟೇ ಕಾಸರಗೋಡು ಜಿಲ್ಲೆಯ ಉಪ್ಪಳ ಬಳಿ ಸ್ವಂತ ಫೋಟೋಗ್ರಾಫಿ ಸ್ಟುಡಿಯೋ ಅರಂಭಿಸಿದ್ದರು.