Uncategorized

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

0

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಗೊಂಡಿದೆ. ಅಕಾಡೆಮಿಯ ಅಧ್ಯಕ್ಷರಾದ ಡಾ.ಬಿ.ವಿ.ವಸಂತಕುಮಾರ್ ಅಧ್ಯಕ್ಷತೆಯಲ್ಲಿ ಇಂದು ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ವಿಜೇತ ಕೃತಿಗಳನ್ನು ಪ್ರಕಟಿಸಿದ್ದಾರೆ.

5 ಜನ ಹಿರಿಯ ಸಾಹಿತಿಗಳಿಗೆ ಗೌರವ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರೊ.ಅಮೃತ ಸೋಮೇಶ್ವರ, ವಿದ್ವಾನ್. ಷಣ್ಮುಖಯ್ಯ ಅಕ್ಯೂರಮಠ, ಡಾ.ಕೆ.ಕೆಂಪೇಗೌಡ, ಡಾ.ಕೆ.ಆರ್.ಸಂಧ್ಯಾ ರೆಡ್ಡಿ, ಶ್ರೀ ಅಶೋಕಪುರಂ ಕೆ. ಗೋವಿಂದರಾಜು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ಐವತ್ತು ಸಾವಿರ ರೂ. ನಗದು, ಫಲಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ.

ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರು :
ಶ್ರೀ ಪ್ರೇಮಶೇಖರ್, ಡಾ.ರಾಜಪ್ಪ ದಳವಾಯಿ, ಶ್ರೀಮತಿ ಬಿ.ಟಿ.ಜಾಹ್ನವಿ, ಪ್ರೊ.ಕಲ್ಯಾಣರಾವ್ ಜಿ.ಪಾಟೀಲ್, ಡಾ.ಜೆ.ಪಿ.ದೊಡ್ಡಮನಿ, ಡಾ.ಮೃತ್ಯುಂಜಯ ರುಮಾಲೆ, ಶ್ರೀ ಡಿ.ವಿ.ಪ್ರಹ್ಲಾದ್, ಡಾ.ಎಂ.ಎಸ್.ಆಶಾದೇವಿ, ಶ್ರೀ ಶಿವಾನಂದ ಕಳವೆ, ಶ್ರೀಮತಿ ವೀಣಾ ಬನ್ನಂಜೆ.
ಈ ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂ.ನಗದು, ಪ್ರಮಾಣಪತ್ರವನ್ನು ಒಳಗೊಂಡಿದೆ.

Advertisement. Scroll to continue reading.

2019ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು :
ಸತ್ಯಮಂಗಲ ಮಹಾದೇವ- ಪಂಚವರ್ಣದ ಹಂಸ(ಕಾವ್ಯ), ಸುಮಿತ್ ಮೇತ್ರಿ – ಥಟ್ ಅಂತ ಬರೆದುಕೊಡುವ ರಶೀದಿಯಲ್ಲ ಕವಿತೆ (ನವಕವಿಗಳ ಪ್ರಥಮ ಸಂಕಲನ), ವಸುದೇಂದ್ರ-ತೇಜೋತುಂಗಭದ್ರಾ(ಕಾದಂಬರಿ), ಲಕ್ಷ್ಮಣ ಬಾದಾಮಿ – ಒಂದು ಚಿಟಿಕೆ ಮಣ್ಣು(ಸಣ್ಣಕತೆ),
ಉಷಾ ನರಸಿಂಹನ್ ರ ಕಂಚುಗನ್ನಡಿ , (ನಾಟಕ),ರಘುನಾಥ ಚಹಾ-ಬೆಳ್ಳಿ ತೊರೆ(ಲಲಿತ ಪ್ರಬಂಧ), ಡಿ.ಜಿ.ಮಲ್ಲಿಕಾರ್ಜುನ – ಯೋರ್ದಾನ್ ಪಿರೆಮನ್(ಪ್ರವಾಸ ಸಾಹಿತ್ಯ), ಬಿ.ಎಂ.ರೋಹಿಣಿ-ನಾಗಂದಿಯೊಳಗಿಂದ(ಜೀವನಚರಿತ್ರೆ/ಆತ್ಮಕಥೆ), ಡಾ.ಗುರುಪಾದ ಮರಿಗುದ್ದಿ – ಪೊದೆಯಿಂದಿಳಿದ ಎದೆಯ ಹಕ್ಕಿ(ಸಾಹಿತ್ಯ ವಿಮರ್ಶೆ), ವಸುಮತಿ ಉಡುಪ – ಅಭಿಜಿತನ ಕತೆಗಳು(ಮಕ್ಕಳ ಸಾಹಿತ್ಯ), ಡಾ.ಕೆ.ಎಸ್.ಪವಿತ್ರ – ಆತಂಕ ಮತ್ತು ಭಯಕ್ಕೆ ಸಂಬಂಧಿಸಿದ ಕಾಯಿಲೆಗಳು(ವಿಜ್ಞಾನ ಸಾಹಿತ್ಯ), ಡಾ.ಮಹಬಲೇಶ್ವರ ರಾವ್ – ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು (ಮಾನವಿಕ), ಡಾ.ಚನ್ನಬಸವಯ್ಯ ಹಿರೇಮಠ-ಅನಾವರಣ(ಸಂಶೋಧನೆ), ಗೀತಾ ಶೆಣೈ-ಕಾಳಿಗಂಗಾ (ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದ), ಧರಣೇಂದ್ರ ಕುರಕುರಿ-ಜ್ವಾಲಾಮುಖಿ ಪರ್(ಕನ್ನಡದಿಂದ ಭಾರತೀಯ ಭಾಷೆಗೆ ಅನುವಾದ), ಸುಧಾ ಆಡುಕಳ -ಬಕುಳದ ಬಾಗಿಲಿನಿಂದ(ಅಂಕಣ ಬರಹ/ವೈಚಾರಿಕ ಬರಹ), ಪ್ರೊ.ಡಿ.ವಿ.ಪರಮಶಿವಮೂರ್ತಿ, ಡಿ.ಸಿದ್ಧಗಂಗಯ್ಯ – ನೊಳಂಬರ ಶಾಸನಗಳು (ಸಂಕೀರ್ಣ), ಕಪಿಲ ಪಿ.ಹುಮನಾಬಾದೆ – ಹಾಣಾದಿ(ಲೇಖಕರ ಮೊದಲ ಸ್ವತಂತ್ರ ಕೃತಿ)

ಈ ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂ. ಬಹುಮಾನ ಮತ್ತು ಪ್ರಮಾಣ ಪತ್ರ ಒಳಗೊಂಡಿದೆ.


ದತ್ತಿ ಬಹುಮಾನ ಪುರಸ್ಕೃತರು :
ಅನುಪಮಾ ಪ್ರಸಾದ್ – ಪಕ್ಕಿ ಹಳ್ಳದ ಹಾದಿಗುಂಟ(ಕಾದಂಬರಿ-ಚದುರಂಗ ದತ್ತಿನಿಧಿ ಬಹುಮಾನ), ನೀತಾ ರಾವ್ – ಹತ್ತನೇ ಕ್ಲಾಸಿನ ಹುಡುಗಿಯರು(ಲಲಿತ ಪ್ರಬಂಧ-ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನ), ಡಾ. ಬಿ. ಪ್ರಭಾಕರ ಶಿಶಿಲ – ಬೊಗಸೆ ತುಂಬಾ ಕನಸು(ಜೀವನ ಚರಿತ್ರೆ- ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ), ಡಾ.ಎಂ.ಉಷಾ-ಕನ್ನಡ ಮ್ಯಾಕ್ ಬೆತ್ ಗಳು(ಸಾಹಿತ್ಯ ವಿಮರ್ಶೆ-ಪಿ.ಶ್ರೀನಿವಾಸ ರಾವ್ ದತ್ತಿನಿಧಿ ಬಹುಮಾನ), ಜಿ.ಎನ್. ರಂಗನಾಥ ರಾವ್ – ಶ್ರೀ ಮಹಾಭಾರತ 1,2,3 ಮತ್ತು 4(ಅನುವಾದ – ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿ ನಿಧಿ ಬಹುಮಾನ), ಭಾಗ್ಯಜ್ಯೋತಿ ಹಿರೇಮಠ – ಪಾದಗಂಧ(ಲೇಖಕರ ಮೊದಲ ಸ್ವತಂತ್ರ ಕೃತಿ-ಮಧುರಚೆನ್ನ ದತ್ತಿನಿಧಿ ಬಹುಮಾನ), ಪ್ರಮೋದ್ ಮುತಾಲಿಕ್ – ಬಿಯೊಂಡ್ ಲೈಫ್ (ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ – ಅಮೆರಿಕನ್ನಡ ದತ್ತಿನಿಧಿ ಬಹುಮಾನ), ಮಲ್ಲಿಕಾರ್ಜುನ ಕಡಕೋಳ – ಯಡ್ರಾಮಿ ಸೀಮೆ ಕಥನಗಳು(ವೈಚಾರಿಕ/ಅಂಕಣಬರಹ-ಬಿ.ವಿ.ವೀರಭದ್ರಪ್ಪ ದತ್ತಿನಿಧಿ), ಲಕ್ಷ್ಮೀಕಾಂತ್ ಪಾಟೀಲ್ – ಶ್ರೀ ಪ್ರಸನ್ನವೆಂಕಟದಾಸರ್ಯಕೃತ, ಶ್ರೀ ಲಕ್ಷ್ಮೀದೇವಿ ಅಪ್ರಕಟಿತ ಸ್ತುತಿ ರತ್ನಗಳು(ದಾಸ ಸಾಹಿತ್ಯ – ಶ್ರೀಮತಿ ಜಲಜಾ ಶ್ರೀಪತಿಆಚಾರ್ಯ ಗಂಗೂರ್ ದತ್ತಿನಿಧಿ ಬಹುಮಾನ)

https://diksoochinews.in/wp-content/uploads/2021/01/A-to-Z-ADD-1.mp4

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com