ಕಾಪು : ಹೆದ್ದಾರಿಯಲ್ಲಿ ಹಸಿದ ವಾಹನ ಚಾಲಕರ ಹೊಟ್ಟೆ ತುಂಬಿಸುತ್ತಿರುವ ಉಚ್ಚಿಲದ ಯುವಕರು
Published
0
ವರದಿ: ಶಫೀ ಉಚ್ಚಿಲ
ಕಾಪು : ಕೊವಿಡ್ 19 ಲಾಕ್ಡೌನ್ನಿಂದಾಗಿ ವಾಹನ ಚಾಲಕರು ಆಹಾರ ಸಿಗದೆ ಪರಿತಪಿಸುವಂತಾಗಿದ್ದು, ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು-ಉಡುಪಿ ರಸ್ತೆಯಲ್ಲಿ ಬಹುತೇಕ ಹೊಟೇಲುಗಳು ಬಾಗಿಲು ಮುಚ್ಚಿದೆ. ಈ ಸಮಸ್ಯೆಯನ್ನು ಮನಗಂಡ ಉಚ್ಚಿಲದ ಪೇಟೆ ಭಾಗದಲ್ಲಿರುವ ಬ್ಲೂ ವೇವ್ಸ್ ಕಟ್ಟಡದಲ್ಲಿರುವ ನಿಸಾರ್ ಮುಲ್ಕಿ ಇವರ ನೇತ್ರತ್ವದ ಯುವಕರ ತಂಡ ಹಾಗು ದಾನಿಗಳ ಸಹಕಾರದಿಂದ ಕಳೆದ ಮೂರು ದಿನಗಳಿಂದ ಪ್ರತಿದಿನ ಈ ಮಾರ್ಗವಾಗಿ ಸಂಚರಿಸುವ ವಾಹನ ಚಾಲಕರಿಗೆ ಉಚಿತ ಊಟದ ವ್ಯವಸ್ಥೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಈ ತಂಡ ಉಚ್ಚಿಲ ಪೇಟೆಯಲ್ಲಿ ಪ್ರತೀ ದಿನ ಸಾಯಂಕಾಲ 5:00 ಗಂಟೆಯ ಬಳಿಕ ಅನ್ನ-ನೀರಿಲ್ಲದೇ ಸಂಚರಿಸುವ ಸರಕು ಸಾಗಣೆ ವಾಹನಗಳ ಚಾಲಕರಿಗೆ, ನಿರ್ವಾಹಕರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.ಆಹಾರ, ನೀರು ಪಡೆದುಕೊಂಡ ಚಾಲಕರು ತಮಗೆ ಊಟ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿ ಹೊರಡುತ್ತಿದ್ದಾರೆ.