ಕುಂದಾಪುರ: ಕೋಟ ಗಿಳಿಯಾರು ಪರಿಸರದ ಯುವ ಕೃಷಿಕ ಭೋಜ ಪೂಜಾರಿ ತನ್ನ ಎರಡು ಎಕ್ಕರೆ ಪ್ರದೇಶದ ಕೃಷಿ ಭೂಮಿಯಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಆದರೆ ಲಾಭವಾಗಬೇಕಿದ್ದ ಕಲ್ಲಂಗಡಿ ಹಣ್ಣಿನ ಕೃಷಿ ನಷ್ಟದ ಖಾತೆಗೆ ಸೇರಿಕೊಂಡಿದೆ. ಪ್ರತಿವರ್ಷ ತಾನು ಪ್ರೀತಿಸುವ ಕೃಷಿ ಭೂಮಿಯಲ್ಲಿ ಭತ್ತ,ಉದ್ದು,ಅವಡೆ ಹೀಗೆ ನಾನಾ ರೀತಿಯ ಬೆಳೆಯ ಜೊತೆ ಲಾಭದಾಯಕ ಕಲ್ಲಂಗಡಿ ಹಣ್ಣಿನ ಕೃಷಿ ಬೆಳೆಯುತ್ತಾರೆ. ಆದರೆ, ಪ್ರತಿ ವರ್ಷ ಒಂದಲ್ಲಾ ಒಂದು ರೀತಿಯ ಸಮಸ್ಯೆ ಎದುರಿಸುವ ಭೋಜ ಪೂಜಾರಿಗೆ ಈ ಬಾರಿ ದೊಡ್ಡ ಮಟ್ಟದ ಸಂಕಷ್ಟ ಎದುರಾಗಿದೆ. ಕಳೆದ ವರ್ಷ ಹಳದಿ ಎಲೆ ರೋಗದಿಂದ ಕಂಗೆಟ್ಟ ಭೋಜ ಪೂಜಾರಿ ಈ ವರ್ಷ ಅತಿ ಉತ್ಸಾಹದಿಂದ ಲಾಭದ ನಿರೀಕ್ಷೆ ಹುಸಿಯಾಗುವಂತೆ ಮಾಡಿತು. ಕೊಯ್ಲಿಗೆ ಬರುವ ಸನ್ನಿವೇಶದಲ್ಲಿ ಅಕಾಲಿಕ ಮಳೆ ಎಂಬುವುದು ಬೆಂಬಿಡದ ಭೂತದಂತೆ ಕಾಡಿತು.
ಸಾಧಾರಣವಾಗಿ ೨೦ ರಿಂದ ೨೫ ಟನ್ ಬೆಳೆಯ ನಿರೀಕ್ಷೆಯೊಂದಿಗೆ ಕೊಯ್ಲಿಗಿಳಿದ ಭೋಜ ಪೂಜಾರಿ ೧೦ಟನ್ ಗೆ ಸಂತುಷ್ಟರನ್ನಾಗಿಸಿತು. ಇನ್ನುಳಿದ ಕಾಯಿಗಳ ಕೊಯ್ಯುವಷ್ಟರಲ್ಲಿ ಮಳೆ ರೌದ್ರ ನರ್ತನ ಕಲ್ಲಂಗಡಿಯ ಮೇಲೆ ಬೀರಿ ಹುಳಗಳ ಬಾಧೆಯೊಂದಿಗೆ ಸುಮಾರು ೧೫ ಟನ್ ಕೊಳೆಯುವಂತೆ ಮಾಡಿತು. ಈ ರೀತಿಯ ಸನ್ನಿವೇಶದಲ್ಲಿ ತನ್ನ ಹೊಲದಲ್ಲಿ ಉಳಿದ ಹಣ್ಣಿನ್ನು ತನ್ನ ಮಕ್ಕಳೊಂದಿಗೆ ಹೊಲಕ್ಕಿಳಿದು ಕೊಯ್ದು ಮಾಧ್ಯಮಕ್ಕೆ ಬಿತ್ತರಿಸಿದರು. ಹೀಗಾದರೆ ರೈತರ ಪಾಡೇನು ಎಂಬ ನೋವನ್ನು ವ್ಯಕ್ತಪಡಿಸಿ ಸರಕಾರ ರೈತರಿಗಾದ ನಷ್ಟಕ್ಕೆ ಸ್ಪಂದಿಸಲು ಆಗ್ರಹಿಸಿದರು.
ಲಾಕ್ ಡೌನ್ ಬಿಸಿ; ಅಕಾಲಿಕ ಮಳೆ
ಅತ್ತ ಲಾಕ್ ಡೌನ್ ಬಿಸಿ ಒಂದೆಡೆಯಾದರೆ, ಇತ್ತ ಅಕಾಲಿಕ ಮಳೆಯ ರೌದ್ರ ನರ್ನತ ರೈತನನ್ನು ಮಂಕಾಗಿಸಿದೆ. ತಾನು ನಿರೀಕ್ಷೆಯಲ್ಲಿದ್ದ ಲಾಭದ ಖಾತೆಯನ್ನು ಅಕಾಲಿಕ ಮಳೆ ನುಂಗಿಬಿಟ್ಟಿತು. ಒಳ್ಳೆಯ ದರ ತನಗೆ ಸಿಗಬಹುದೊ ಎನೋ ಎಂಬ ನಿರೀಕ್ಷೆಯೊಂದಿಗೆ ಕಾಯಕಕ್ಕೆ ಇಳಿದ ಭೋಜ ಪೂಜಾರಿಗೆ ಲಾಕ್ ಡೌನ್, ಅಕಾಲಿಕ ಮಳೆ ನಿರೀಕ್ಷೆಯನ್ನು ಹುಸಿಯಾಗುವಂತೆ ಮಾಡಿತು. ಅಲ್ಲದೆ ಸಾಲಮಾಡಿ ಕಲ್ಲಂಗಡಿ ಬೆಳೆದವರ ಪಾಡು ಶೋಚನೀಯ ಎಂದರೆ ತಪ್ಪಾಗಲಿಕ್ಕಿಲ್ಲ.