ಕುಂದಾಪುರ : ಲಾಕ್ ಡೌನ್ ಗೊಂದಲದ ಗೂಡಾಗಿದೆ – ಪ್ರದೀಪ್ ಶೆಟ್ಟಿ
Published
0
ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಜನತಾ ಕರ್ಫ್ಯೂ ವಿನ ವೈಫಲ್ಯದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಲಾಕ್ ಡೌನ್ ಘೋಷಣೆಯನ್ನು ಮಾಡಿದ್ದರು. ಆದರೆ ಕೊರೊನಾ ನಿಯಂತ್ರಣಕ್ಕೆ ಬರುತ್ತದೆ ಎಂದುಕೊಂಡಿದ್ದ ಸಾರ್ವಜನಿಕರ ನಿರೀಕ್ಷೆಗೆ ಅದು ವ್ಯತಿರಿಕ್ತವಾಗಿತ್ತು. ಸಾರ್ವಜನಿಕರು, ತಜ್ಞರು, ಪತ್ರಿಕಾ ಮಾಧ್ಯಮದವರು, ಬೇರೆ ಬೇರೆ ರಾಜಕಾರಣಿಗಳು, ಜನಪ್ರತಿನಿಧಿಗಳು ಅಭಿಪ್ರಾಯಗಳನ್ನು ನೀಡಿದ್ದರೂ ಅದರ ವಿರುದ್ಧವಾಗಿ ಜನತಾ ಕರ್ಫ್ಯೂ ವಿನ ಮಾದರಿಯಲ್ಲಿಯೇ ಲಾಕ್ ಡೌನ್ ಮಾಡಿದ್ದು, ಇದು ಗೊಂದಲದ ಗೂಡಾಗಿದೆ ಎಂದು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಗುಡಿಬೆಟ್ಟು ಹೇಳಿದ್ದಾರೆ. ಮುಖ್ಯಮಂತ್ರಿಯವರು ಮೇ 10 ರಿಂದ 24 ರ ವರೆಗೆ ಲಾಕ್ ಡೌನ್ ಎಂದಿದ್ದರೆ, ಕೆಲವೇ ಕ್ಷಣಗಳಲ್ಲಿ ಅವರ ಕಾರ್ಯದರ್ಶಿ, ಇದು ಲಾಕ್ ಡೌನ್ ಅಲ್ಲ, ಇದು ಸೆಮಿ ಲಾಕ್ ಡೌನ್. ಜನತಾ ಕರ್ಫ್ಯೂ ನಲ್ಲಿ ಕೆಲವೊಂದು ನಿರ್ಬಂಧಗಳನ್ನು ಹೇರಿದ್ದೇವೆ ಎಂದಿದ್ದಾರೆ. ಇದರಿಂದ ಗೊಂದಲವುಂಟಾಗಿದೆ. ದಿನಸಿ ಅಂಗಡಿ, ಬಾರ್, ಹೊಟೇಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಇಟ್ಟು, ಜನರು ಗಾಡಿಯಲ್ಲಿ, ಬೈಕ್ ಗಳಲ್ಲಿ ತಿರುಗಾಡಬಾರದು. ಕೇವಲ ನಡೆದುಕೊಂಡು ಬರಬೇಕು ಎಂಬ ಧೋರಣೆ ಸಾರ್ವಜನಿಕರಿಗೆ ವಿರುದ್ಧವಾಗಿದೆ” ಎಂದಿದ್ದಾರೆ.
ಎರಡು ದಿನಗಳಿಗೊಮ್ಮೆ ಅವಕಾಶವೋ ಅಥವಾ ಈಗಿರುವಂತೆ ಸಮಯ ನಿಗದಿ ಮಾಡುವುದನ್ನು ಬಿಟ್ಟು ಗಾಡಿಗಳ ಬದಲಿಗೆ ನಡೆದುಕೊಂಡು ಹೋಗಿ ಅಗತ್ಯ ಸಾಮಾನುಗಳ ಖರೀದಿಸುವುದು ಹೇಗೆ? ಸಿಟಿಗಳಿಗೆ ಅನ್ವಯಿಸಬಹುದು. ಆದರೆ,ಹಳ್ಳಿ ಪ್ರದೇಶಗಳಿಗೆ ಕಷ್ಟ. ಪೊಲೀಸರಿಗರಿಗೂ ವಿರೋಧ ಬರಬಹುದು. ಪೊಲೀಸರು ಕಷ್ಟ ಪಡಬೇಕಾದೀತು. ಇದು ತಲೆಯಿಲ್ಲದ ಸರ್ಕಾರ ಮಾಡಿದ ಲಾಕ್ ಡೌನ್ ಆಗಿದ್ದು, ಇದರಿಂದ ಕೊರೋನಾ ನಿಯಂತ್ರಣ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.