ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕೋವಿಡ್ ಸಂಕಷ್ಟದಿಂದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸೇವಾಕೇಂದ್ರದ ಫಲಾನುಭವಿಗಳಿಗೆ ವಿತರಣೆ ಆಗಬೇಕಾದ ಮಾಸಾಶನವನ್ನು ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರ ಸೂಚನೆಯಂತೆ ನೀಡಲಾಯಿತು.
ಬ್ರಹ್ಮಾವರ ತಾಲೂಕಿನ ಉಪ್ಪೂರು ವಲಯದ ಅಕ್ಕಯ್ಯ, ಪ್ರೇಮ ತೆಂಕಬೆಟ್ಟು, ಮಹೇಂದ್ರ ಚಾಂತಾರು, ಗಿರಿಜಾ ಪೂಜಾರ್ತಿ ಹೇರೂರು, ಮಂಜುನಾಥ್ ಜಾಥಬೆಟ್ಟು ಅವರಿಗೆ ಪ್ರತಿ ತಿಂಗಳು ವಿತರಿಸುತ್ತಿದ್ದ ಮಾಸಾಶನವನ್ನು ವಲಯದ ಮೇಲ್ವಿಚಾರಕಿ ಬಾಬಿ. ಎಮ್ ಮನೆ ಭೇಟಿ ಮಾಡಿ ಮಾಸಾಶನವನ್ನು ಫಲಾನುಭವಿಗಳಿಗೆ ವಿತರಣೆ ಮಾಡಿದರು.
ಬ್ರಹ್ಮಾವರ ತಾಲೂಕಿನ ವ್ಯಾಪ್ತಿಯಲ್ಲಿ ಆಯ್ದ ಕುಟುಂಬಗಳಿಗೆ ಪ್ರತಿ ತಿಂಗಳು 51050/-ಮೊತ್ತವನ್ನು ಮಾಶಾಸನ ವಾಗಿ ಯೋಜನೆಯಿಂದ ವಿತರಣೆ ಮಾಡಲಾಗುತ್ತಿದೆ.
Advertisement. Scroll to continue reading.