Uncategorized

ಜಲಾಲುದ್ದೀನ್ ಉಚ್ಚಿಲ ಅವರಿಗೆ ತವಕ್ಕಲ್ ಓವರ್ಸೀಸ್ ಸಂಸ್ಥೆಯ “Personality of the year 2021” ಪ್ರಶಸ್ತಿ ಪ್ರದಾನ

0

ವರದಿ: ಶಫೀ ಉಚ್ಚಿಲ

ಉಚ್ಚಿಲ: ತವಕ್ಕಲ್ ಓವರ್ಸೀಸ್ ಸಂಸ್ಥೆಯ ವತಿಯಿಂದ ತವಕ್ಕಲ್ ಮುಸ್ಲಿಮ್ ಯಂಗಮೆನ್ಸ್ ಅಸೋಸಿಯೇಷನ್ ಉಚ್ಚಿಲ ಇದರ ನೇತ್ರತ್ವದಲ್ಲಿ ಉಚ್ಚಿಲದ ಸಮಾಜ ಸೇವಕ ಮುಹಮ್ಮದ್ ಜಲಾಲುದ್ದೀನ್ ಇವರಿಗೆ “personality of the year 2021” ಪ್ರಶಸ್ತಿ ಹಾಗೂ ರೂ. 25,000 ದ ಚೆಕ್ ನೀಡಿ ಗೌರವಿಸಲಾಯಿತು.

ತವಕ್ಕಲ್ ಮುಸ್ಲಿಮ್ ಯಂಗಮೆನ್ಸ್ ಅಸೋಸಿಯೇಷನ್ ಉಚ್ಚಿಲ ಇದರ ಅಧೀನದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿರುವ ” ತವಕ್ಕಲ್ ಓವರ್ಸೀಸ್ ” ಸಂಸ್ಥೆಯು ವರ್ಷಂಪ್ರತಿ ಸಮಾಜ ಸೇವಕರನ್ನು ಗುರುತಿಸಿ ಅವರಿಗೆ ಗೌರವ ಸನ್ಮಾನ ನೀಡುವ ಮೂಲಕ ಅವರಲ್ಲಿ ಮತ್ತಷ್ಟು ಸಮಾಜಿಕ ಕಳಕಳಿ ಹೆಚ್ಚಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ನಡೆಸುತ್ತಿದೆ. ಅದರಂತೆ ಪ್ರಸಕ್ತ ವರ್ಷವು ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದ್ದು, ವೃತ್ತಿ ಜೀವನದೊಂದಿಗೆ ಉಚ್ಚಿಲ ಪರಿಸರದಲ್ಲಿ ನಿರಂತರ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಮುಹಮ್ಮದ್ ಜಲಾಲುದ್ದೀನ್ ಇವರನ್ನು ಸನ್ಮಾನಿಸಲಾಯಿತು. ದುವಾ ಪಠಿಸುವ ಮೂಲಕ ಸಂಸ್ಥೆಯ ಹಿರಿಯ ಸದಸ್ಯರಾದ ವೈ ಅಹ್ಮದ್ ಹಾಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement. Scroll to continue reading.


ಕಾರ್ಯಕ್ರಮದಲ್ಲಿ ತವಕ್ಕಲ್ ಮುಸ್ಲಿಮ್ ಯಂಗಮೆನ್ಸ್ ಅಸೋಸಿಯೇಷನ್ ಉಚ್ಚಿಲ ಇದರ ಅಧ್ಯಕ್ಷ ಅಬ್ದುಲ್ ರಝಾಕ್ ಮೋನಬ್ಬ, ತವಕ್ಕಲ್ ಓವರ್ಸಿಸ್ ದುಬೈ ಮಾಜಿ ಅಧ್ಯಕ್ಷ ರಝಕ್ ವೈ.ಎಸ್, ಶರೀಫ್ ಕರೀಂ,ಅಬ್ದುಲ್ ರಝಾಕ್ ಅಹ್ಮದ್ ಬೊಟ್ಟು,ಅಶ್ರಫ್ ಅತ್ರಾಡಿ, ಅಬುಬೂಬಕ್ಕರ್ ಮೋನಬ್ಬ,ರಜಾಬ್ ಮೋನಬ್ಬ, ಆಸೀಫ್ ಬಿ.ಎಮ್ ಹಾಗು ಗ್ರಾ.ಪಂ ಸದಸ್ಯರಾದ ಅಬ್ದುಲ್ ರಝಕ್ ಬಗ್ಗತೋಟ,ಆಸೀಫ್ ವೈ.ಸಿ,ಉಪಸ್ಥಿತರಿದ್ದರು.
ತವಕ್ಕಲ್ ಮುಸ್ಲಿಮ್ ಯಂಗಮೆನ್ಸ್ ಅಸೋಸಿಯೇಷನ್ ಉಚ್ಚಿಲ ಇದರ ಕಾರ್ಯದರ್ಶಿ ಆರಿಫ್ ಕಾಸಿಂ ಸ್ವಾಗತಿಸಿದರು. ತವಕ್ಕಲ್ ಓವರ್ಸಿಸ್ ದುಬೈ ಇದರ ಮಾಜಿ ಅಧ್ಯಕ್ಷ ರಝಾಕ್ ವೈ.ಎಸ್ ಕಾರ್ಯಕ್ರಮ ನಿರೂಪಿಸಿದರು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com