ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋವಿಡ್ ಆಂಬುಲೆನ್ಸ್ ಮಂಜೂರಾಗಿದೆ.
ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ತುರ್ತು ಸೇವೆ ಸಲ್ಲಿಸಲು ಅಂಬುಲೆನ್ಸ್ ವಾಹನದ ಅವಶ್ಯ ಬಗ್ಗೆ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಸಂಸದರ ಗಮನಕ್ಕೆ ತಂದಿದ್ದು ಅವರು ಕೂಡಲೆ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಸದ್ಯ 108 ಆಂಬುಲೆನ್ಸ್ ವಾಹನವನ್ನು ಕೋವಿಡ್ 19 ಅಂಬುಲೆನ್ಸ್ ಆಗಿ ನಿಯೋಜಿಸಲಾಗಿದ್ದು, ಕೊರೋನಾ ಸೋಂಕಿತರನ್ನು ಸಂಬಂಧಪಟ್ಟ ಆಸ್ಪತ್ರೆಗೆ ಸಾಗಿಸಲು ಶುಕ್ರವಾರದಿಂದ ಬಳಸಿಕೊಳ್ಳಲಾಗುತ್ತಿದೆ.
Advertisement. Scroll to continue reading.
ಸಂಸದರ ಹಾಗೂ ಶಾಸಕರ ಈ ತುರ್ತು ಸ್ಪಂದನ ಕಾರ್ಯಕ್ಕೆ ಸಿದ್ದಾಪುರ ಭಾಗದ ಜನರು ಪ್ರಶಂಸಿದ್ದಾರೆ.